ರಾಜ್ಯಶಾಸ್ತ್ರ 11ನೇ ಇಯತ್ತೆ
ಸಂಕಲನೆ ಮತ್ತು ಲೇಖನ
ಶ್ರೀ.
ದಿನೇಶ ಠಾಕೂರದಾಸ ಚವ್ಹಾಣ
ಶಿಕ್ಷಕರು
: ಜಿ. ಪ.
ಪ್ರಾಥಮಿಕ ಕನ್ನಡ ಶಾಲೆ, ಬಬಲಾದ
ತಾ.
ಅಕ್ಕಲಕೋಟ ಜಿ. ಸೋಲಾಪುರ
ಮೋ. ನಂ. 7066102066
ಅನುಕ್ರಮಣಿಕೆ
ಭಾಗ 1 : ರಾಜಕೀಯ ಸಂಕಲ್ಪನೆ
ಪ್ರಸ್ತಾವನೆ
...........................................................................
1.
ರಾಜ್ಯ .............................................................................
2.
ಸ್ವಾತಂತ್ರ್ಯ ಹಾಗೂ ಹಕ್ಕುಗಳು ................................................
3.
ಸಮತೆ ಮತ್ತು ನ್ಯಾಯ ..........................................................
ಭಾಗ 2 : ತುಲನಾತ್ಮಕ ಶಾಸನ ಹಾಗೂ ರಾಜಕಾರಣ
ಪ್ರಸ್ತಾವನೆ
..............................................................................
4.
ಸಾಂವಿಧಾನಿಕ ಶಾಸನ ............................................................
5.
ಪ್ರತಿನಿಧಿತ್ವದ ಸಂಕಲ್ಪನೆ .......................................................
6. ನ್ಯಾಯಮಂಡಲದ ಭೂಮಿಕೆ/ ನ್ಯಾಯಪಾಲಿಕೆಯ ಪಾತ್ರ.........................
ಭಾಗ 3 : ಲೋಕಪ್ರಶಾಸನ/ಜನಪ್ರಶಾಸನ
ಪ್ರಸ್ತಾವನೆ
..............................................................................
7.
ಲೋಕಪ್ರಶಾಸನ ...................................................................
8.
ವಿಕಾಸ ಪ್ರಶಾಸನ ................................................................
ಭಾಗ 4 : ಆಂತರರಾಷ್ಟ್ರೀಯ ಸಂಬಂಧ
ಪ್ರಸ್ತಾವನೆ
..............................................................................
9.
1945 ರ ನಂತರದ
ಜಗತ್ತು – I ...................................................
10. 1945 ರ ನಂತರದ ಜಗತ್ತು –
II ...................................................
ಜಗತ್ತಿನ ನಕಾಶೆ
ಭಾಗ
1 : ರಾಜಕೀಯ ಸಂಕಲ್ಪನೆ
1.ರಾಜ್ಯ
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು ಗುರುತಿಸಿ
ವಿಧಾನಗಳನ್ನು ಪೂರ್ಣಗೊಳಿಸಿರಿ.
1. ಇಂಗ್ಲಿಷ್ನಲ್ಲಿ ನೇಷನ್ ಎಂಬ ಪದವು
ಲ್ಯಾಟಿನ್ ಪದ ..............ದಿಂದ ನಿರ್ಮಾಣವಾಗಿದೆ.
(Nasci, Natio, Natalis, Nauto)
2. ಉದಾರಮತವಾದಿ ರಾಷ್ಟ್ರವಾದವು
................ ರಾಜ್ಯಕ್ರಾಂತಿಯಲ್ಲಿ
ಹುಟ್ಟಿಕೊಂಡಿತು.
(ಅಮೇರಿಕನ್, ರಷ್ಯನ್, ಫ್ರೆಂಚ್, ಬ್ರಿಟಿಷ್)
(ಬ) ತಪ್ಪು ಜೋಡಿಯನ್ನು ಸರಿಪಡಿಸಿ
ಬರೆಯಿರಿ.
(i) ಅರಿಸ್ಟಾಟಲ್ - ಜರ್ಮನ್ ವಿಚಾರವಂತರು
(ii) ಜಾನ್ ಬೋಡಿನ್ - ಫ್ರೆಂಚ್ ವಿಚಾರವಂತರು
(iii) ವುಡ್ರೋ ವಿಲ್ಸನ್ - ಅಮೇರಿಕನ್ ವಿಚಾರವಂತರು
(iv) ಹೆರಾಲ್ಡ್ ಲಾಸ್ಕಿ - ಬ್ರಿಟಿಷ್ ವಿಚಾರವಂತರು
ಸರಿಯಾದ ಜೋಡಿ: ಅರಿಸ್ಟಾಟಲ್ – ಪ್ರಾಚೀನ
ಗ್ರೀಕ್ ವಿಚಾರವಂತರು
(ಕ) ನೀಡಿರುವ ಹೇಳಿಕೆಗಳಿಗೆ ಸೂಕ್ತವಾದ ಸಂಕಲ್ಪನೆಯನ್ನು ಬರೆಯಿರಿ.
1. ರಾಜಕೀಯ ಮಟ್ಟದಲ್ಲಿ ಜನರನ್ನು ದೇಶದೊಂದಿಗೆ ಏಕನಿಷ್ಠನನ್ನಾಗಿಸುವ
ಶಕ್ತಿ –ರಾಷ್ಟ್ರ
ವಾದ
2. ರಾಜ್ಯವು ಆಳುವ ಹಕ್ಕನ್ನು ಹೊಂದಿರುವ ಪ್ರದೇಶ
– ರಾಜ್ಯ
ಪ್ರಶ್ನೆ.2 ಕೆಳಗಿನ ವಿಧಾನಗಳನ್ನು ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
1. ಪ್ರಾಗತಿಕ ರಾಷ್ಟ್ರವಾದವು
ಜನರಲ್ಲಿ
ವಿಭಜನೆಯನ್ನು ಉಂಟುಮಾಡಬಹುದು.
ಉತ್ತರ: ತಪ್ಪು,
ಏಕೆಂದರೆ ಆಕ್ರಮಕ ರಾಷ್ಟ್ರವಾದವು ವಿಭಜನೆಯನ್ನು ಉಂಟುಮಾಡಬಹುದು.
2. ಸಾರ್ವಭೌಮತ್ವ ಎಂದರೆ ಒಂದು ದೇಶಕ್ಕೆ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು.
ಉತ್ತರ: ಸರಿ, ಕಾರಣ
ಪರತಂತ್ರದಲ್ಲಿ ಇರುವ ಅಥವಾ ಸಾರ್ವಭೌಮತ್ವ ಇಲ್ಲದಿರುವ ದೇಶಕ್ಕೆ ಸ್ವತಂತ್ರ ನಿರ್ಣಯ
ತೆಗೆದುಕೊಳ್ಳುವ ಹಕ್ಕು ಇರುವುದಿಲ್ಲ.
3. ಪ್ಯಾಲೆಸ್ಟೈನ್ ಇದು
ಒಂದು
ರಾಜ್ಯವಾಗಿದೆ.
ಉತ್ತರ: ಸರಿ, ಕಾರಣ ಪ್ಯಾಲೆಸ್ಟೈನ್ ಜನರ ಪ್ರತಿನಿಧಿ ಎಂದು ಪ್ಯಾಲೆಸ್ಟೈನ್
ಮುಕ್ತಿ ಸಂಘಟನೆ(ಪಿಎಲ್ಓ)ಗೆ ಸಂಯುಕ್ತ ರಾಷ್ಟ್ರವು ಮಾನ್ಯತೆ ಇರುತ್ತದೆ.
4. ಪ್ರಸಾರವಾದಿ
ರಾಷ್ಟ್ರವಾದವು
ಒಂದು
ರೀತಿಯ ಆಕ್ರಮಣಕಾರಿ ರಾಷ್ಟ್ರವಾದವಾಗಿದೆ.
ಉತ್ತರ: ಪ್ರಸಾರವಾದಿ ರಾಷ್ಟ್ರವಾದವು ಆಕ್ರಮಕ
ಸ್ವರೂಪದ್ದು ಇರುತ್ತದೆ. ರಾಷ್ಟ್ರೀಯ ಗೌರವಾಕ್ಕಾಗಿ ರಾಷ್ಟ್ರಗಳು ಆಕ್ರಮಕವಾಗುತ್ತವೆ ಮತ್ತು
ಸಾಮ್ರಾಜ್ಯ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತವೆ. ಆದ್ದರಿಂದ ಪ್ರಸಾರವಾದಿ ರಾಷ್ಟ್ರವಾದವು
ಒಂದು ರೀತಿಯ ಆಕ್ರಮಣಕಾರಿ ರಾಷ್ಟ್ರವಾದವಾಗಿದೆ.
ಪ್ರಶ್ನೆ.3. ನಿಮ್ಮ ಅಭಿಪ್ರಾಯವನ್ನು
ದಾಖಲಿಸಿ.
1. ಭಾರತ ಒಂದು ರಾಜ್ಯವಾಗಿದೆ.
ಉತ್ತರ: ರಾಜಶಾಸ್ತ್ರದಲ್ಲಿ, 'ರಾಜ್ಯ' ಎಂಬ ಪದವನ್ನು ಸಾರ್ವಭೌಮ ದೇಶವನ್ನು ವಿವರಿಸಲು
ಬಳಸಲಾಗುತ್ತದೆ. ವಸಾಹತುಶಾಹಿ ವಿರೋಧಿ ರಾಷ್ಟ್ರೀಯತೆಯು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ
ಮತ್ತು ನಂತರದ ಸ್ವಾತಂತ್ರ್ಯಕ್ಕೆ ಕಾರಣವಾಯಿತು . 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯವಾಯಿತು.
ಯಾವುದೇ ರಾಜ್ಯವು ಈ ಕೆಳಗಿನ ಅಂಶಗಳನ್ನು ಹೊಂದಿದೆ:
• ಸಾರ್ವಭೌಮತ್ವ:
ಭಾರತವು ಜನವರಿ 26, 1950 ರಂದು ಸಂವಿಧಾನ ಜಾರಿಗೆ
ಬಂದಾಗ ಸಾರ್ವಭೌಮ ಗಣರಾಜ್ಯವನ್ನು ಅಂಗೀಕರಿಸಿತ್ತು.
• ಸರ್ಕಾರ:
ಬ್ರಿಟಿಷ್ ಸರ್ಕಾರ ವಸಾಹತು ಸರ್ಕಾರವಿತ್ತು ಆದರೆ ಅದು ಸಾರ್ವಭೌಮ ಸರ್ಕಾರವಾಗಿರಲಿಲ್ಲ ಆದಾಗ್ಯೂ, ರಾಜಕೀಯ ಸ್ವಾತಂತ್ರ್ಯದ ನಂತರ, ಭಾರತದಲ್ಲಿ ಸಾರ್ವಭೌಮ,
ಸಂಸದೀಯ, ಗಣರಾಜ್ಯ ಸರ್ಕಾರವನ್ನು ರಚಿಸಲಾಯಿತು.
• ಪ್ರದೇಶ:
ಭಾರತವನ್ನು ಅದರ ಭೌಗೋಳಿಕ ಗಡಿಗಳಿಂದ ವ್ಯಾಖ್ಯಾನಿಸಲಾಗಿದೆ. ಭಾರತದ ವಿಸ್ತಾರದಲ್ಲಿ ಈಗ 29
ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.
• ಜನಸಂಖ್ಯೆ:
ಭಾರತವು ವಿಶಾಲ ಜನಸಂಖ್ಯೆಯನ್ನು ಹೊಂದಿದೆ, ಜನಸಂಖ್ಯೆ,
ಭೂಪ್ರದೇಶ ಮತ್ತು ಭಾಷೆ, ಸಂಸ್ಕೃತಿ, ಧರ್ಮ ಮತ್ತು ಮುಂತಾದವುಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ.
ಹೀಗಾಗಿ, ಭಾರತವು ಒಂದು ರಾಷ್ಟ್ರ-ರಾಜ್ಯ ಎಂದು ನಾವು
ತೀರ್ಮಾನಿಸಬಹುದು.
ಪ್ರಶ್ನೆ.4 ಈ ಕೆಳಗಿನ ಪ್ರಶ್ನೆಗಳಿಗೆ
ಉತ್ತರಗಳನ್ನು ಬರೆಯಿರಿ.
1. ರಾಷ್ಟ್ರದ ಗುಣಲಕ್ಷಣಗಳು ಯಾವುವು?
ಉತ್ತರ: ‘ರಾಷ್ಟ್ರ’
ಎಂಬ ಪದವು ಲ್ಯಾಟಿನ್ ಪದ ‘ನಾಸ್ಸಿ’(Nasci) ಯಿಂದ ಬಂದಿದೆ, ಇದರರ್ಥ ‘ಹುಟ್ಟುವುದು’.
ಹೀಗಾಗಿ, ರಾಷ್ಟ್ರದ ನಿಜವಾದ ಅರ್ಥವು ಸಾಮಾನ್ಯ ಜನರ
ವಂಶಿಕ ಅಥವಾ ಸಾಂಸ್ಕೃತಿಕ ಸಂಪರ್ಕಗಳನ್ನು
ಹೊಂದಿರುವ ದೇಶವೆಂಬುದಾಗಿದೆ. ಅರ್ನೆಸ್ಟ್ ಬಾರ್ಕರ್ ಇವರು ರಾಷ್ಟ್ರವನ್ನು ಒಂದು ನಿರ್ದಿಷ್ಟ
ಪ್ರದೇಶದಲ್ಲಿ ವಾಸಿಸುವ, ಸಾಮಾನ್ಯವಾಗಿ ವಿಭಿನ್ನ ಜನಾಂಗಗಳಿಂದ ಬಂದ
ಆದರೆ ಸಾಮಾನ್ಯ ಐತಿಹಾಸಿಕ ಪರಂಪರೆಯ ಮೂಲಕ ಸಮಾನ ವಿಚಾರ ಹಾಗೂ ಸಮಾನ ಭಾವನೆ, ಧರ್ಮ ಮತ್ತು ಭಾಷೆಗಳು ಹೊಂದಿರುವ ಜನರ ಸಮೂಹ ಎಂದು ವ್ಯಾಖ್ಯಾನಿಸುತ್ತಾರೆ.
ರಾಷ್ಟ್ರದ ವೈಶಿಷ್ಟ್ಯಗಳು:
• ಜನಸಂಖ್ಯೆ:
ಒಂದು ರಾಷ್ಟ್ರವು ಜನಾಂಗೀಯ, ಐತಿಹಾಸಿಕ ಮತ್ತು ಸಾಂಸ್ಕೃತಿಕ
ಏಕತೆಯ ಪ್ರಜ್ಞೆಯನ್ನು ಹೊಂದಿರುವ ಜನಸಂಖ್ಯೆಯನ್ನು ಹೊಂದಿರಬೇಕು.
• ಸಮುದಾಯದ ಭಾವನೆ:
ಜನರ ಸಾಂಸ್ಕೃತಿಕ ಸಮಾನತೆಯಿಂದ ನಾವೆಲ್ಲ ಒಂದು ಎಂಬ ಭಾವನೆ ನಿರ್ಮಾಣವಾಗುತ್ತದೆ. ರಾಷ್ಟ್ರದ
ಭಾವನಾತ್ಮಕ ದೃಷ್ಟಿಕೋನವು ಜನಸಂಖ್ಯೆಯು ಮಾನಸಿಕ ಗ್ರಹಿಕೆಯಾಗಿದೆ.
• ರಾಜಕೀಯ ಭಿನ್ನತೆ:
ಸಾಮಾಜಿಕ , ಸಾಂಸ್ಕೃತಿಕ, ಧಾರ್ಮಿಕ ಅಥವಾ ಭಾಷಿಕ ಸಮಾನತೆ ಇರುವ ಜನರು
ಒಂದು ನಿಶ್ಚಿತ ಭೂಪ್ರದೇಶದಲ್ಲಿ ಬಂದಾಗ ಅವರಲ್ಲಿ ರಾಜಕೀಯ ಭಿನ್ನತೆಯ ಭಾವನೆ
ನಿರ್ಮಾಣವಾಗುತ್ತದೆ. 'ಸ್ವಯಂ-ನಿರ್ಣಯ'ದ
ಪ್ರಚೋದನೆಯಿಂದ ಸ್ವ-ಆಡಳಿತದ ಬೇಡಿಕೆಗೆ ಕಾರಣವಾಗಬಹುದು. ಇದರರ್ಥ ಒಗ್ಗಟ್ಟಿನಿಂದ ಇರುವ ಜನರು
ತಾವು ಯಾವ ರೀತಿಯ ಸರ್ಕಾರವನ್ನು ಬಯಸುತ್ತೇವೆ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಹೊಂದಿರಬೇಕು.
2. ರಾಷ್ಟ್ರೀಯತೆ ಎಂದರೇನು ಮತ್ತು ಅದರ ವಿವಿಧ
ಪ್ರಕಾರಗಳನ್ನು ವಿವರಿಸಿ.
ಉತ್ತರ:
ರಾಷ್ಟ್ರೀಯತೆ ಇದು ಜನರಿಗೆ ದೇಶದೊಂದಿಗೆ ರಾಜಕೀಯ ಸ್ತರದ ಮೇಲೆ ಏಕನಿಷ್ಠವಿರುವ
ಶಕ್ತಿಯಾಗಿದೆ. ಒಂದು ರಾಜಕೀಯ ಅಶ್ಮಿತೆ ಆಗಿದೆ. ಜನರು ರಾಷ್ಟ್ರದೊಂದಿಗೆ ಭಾವನಿಕವಾಗಿ
ಸಮೀಪವಿರುತ್ತಾರೆ. ಈ ಬಂಧನದಿಂದ ಸ್ವಂತ ಅಸ್ತಿತ್ವ ಹಾಗೂ ಅಭಿಮಾನ ನಿರ್ಮಾಣವಾಗುತ್ತದೆ. ಈ
ಭಾವನೆಗಳ ಪ್ರದರ್ಶನೆಯು ಅನೇಕ ಪ್ರಸಂಗಗಳಿಂದ ನೋಡಲು ಸಿಗುತ್ತದೆ. ಉದಾ. ನಮ್ಮ ದೇಶದ ಕ್ರಿಕೆಟ್
ಪಂದ್ಯ ಗೆದ್ದರೆ ಜಯಜಯಕಾರ ಹಾಕುತ್ತೇವೆ. ರಾಷ್ಟ್ರಗೀತೆ ನಡೆಯುತ್ತಿರಲು ಎದ್ದು ನಿಲ್ಲುತ್ತೇವೆ.
ಹಾಗೆ
ಪ್ರಾಗತಿಕ ರಾಷ್ಟ್ರವಾದ(ರಾಷ್ಟ್ರೀಯತೆ) ಹಾಗೂ ಆಕ್ರಮಕ ರಾಷ್ಟ್ರವಾದ ಎಂದು ಎರಡು ಪ್ರಕಾರಗಳು
ಇರುತ್ತವೆ. ಸಮಾಜಕ್ಕೆ ಒಗ್ಗಟ್ಟಿನಲ್ಲಿ ತಂದು ವಿಕಾಸ ಸಾಧಿಸುವ ಕಾರ್ಯ ಪ್ರಾಗತಿಕ ರಾಷ್ಟ್ರೀಯತೆ
ಮಾಡಿದರೆ ಜನರಲ್ಲಿ ಒಡಕನ್ನುಂಟು ಮಾಡುವ ಕೆಲಸ ಆಕ್ರಮಕ ರಾಷ್ಟ್ರೀಯತೆ ಮಾಡುತ್ತದೆ. ರಾಜಕೀಯ
ದೃಷ್ಟಿಕೋನದಿಂದ ರಾಷ್ಟ್ರಿಯತೆಕಡೆಗೆ ನೋಡಿದಾಗ ರಾಷ್ಟ್ರೀಯತೆಯಲ್ಲಿ ಕೆಳಗಿನ ಪ್ರಕಾರಗಳೂ
ಇದ್ದದ್ದು ಕಂಡು ಬರುತ್ತದೆ.
1) ಉದಾರಮತವಾದಿ
ರಾಷ್ಟ್ರೀಯತೆ
2) ಪರಂಪರಾವಾದಿ
ರಾಷ್ಟ್ರೀಯತೆ
3) ಪ್ರಸಾರವಾದಿ
ರಾಷ್ಟ್ರೀಯತೆ
4) ವಸಾಹತ್ತು
ವಿರೋಧಿ ರಾಷ್ಟ್ರೀಯತೆ
ಪ್ರಶ್ನೆ.5 ಕೊಟ್ಟಿರುವ ಅಂಶಗಳ ಆಧಾರದ ಮೇಲಿಂದ ಕೆಳಗಿನ ಪ್ರಶ್ನೆಗೆ ಉತ್ತರಗಳನ್ನು
ಬರೆಯಿರಿ.
ಒಂದು
ರಾಜ್ಯದ ಕೆಳಗಿನ ಅಂಶಗಳನ್ನು ವಿವರಿಸಿ.
(ಅ) ಸಾರ್ವಭೌಮತ್ವ (ಬ) ಶಾಸನಸಂಸ್ಥೆ
(ಕ) ಜನಸಂಖ್ಯೆ (ಡ) ಭೂಪ್ರದೇಶ
ಉತ್ತರ: ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ‘ಸಾರ್ವಭೌಮ, ಗಣರಾಜ್ಯ,
ಪ್ರಜಾಸತಾತ್ಮಕ’ ಎಂಬ ಶಬ್ದಪ್ರಯೋಗ ಮಾಡಲಾಗಿದೆ. ಇಲ್ಲಿ ಸಾರ್ವಭೌಮತ್ವ
ಅಂದರೆ ರಾಷ್ಟ್ರಕ್ಕೆ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ ಎಂದಾಗುತ್ತದೆ.
ಅಂದರೆ ರಾಷ್ಟ್ರ ಅಥವಾ ರಾಜ್ಯವು ಬೇರೆ ರಾಷ್ಟ್ರಗಳ ಮೇಲೆ ನಿರ್ಣಯ ತೆಗೆದುಕೊಳ್ಳಲು ಅವಲಂಬಿಸಿ
ಇರುವುದಿಲ್ಲ. ರಾಜ್ಯಕ್ಕೆ ರಾಜಕೀಯ ಸಮೂಹ ಎಂದು ಸಂಬೋಧಿಸಲಾಗುತ್ತದೆ. ರಾಜ್ಯದ ಅಸ್ಥಿತ್ವದಲ್ಲಿ
ಶಿಕ್ಷಣ, ಸಮಾಜಕಲ್ಯಾಣ, ಸಂರಕ್ಷಣೆ, ಕಾಯದೆ ಹಾಗೂ ಸುವ್ಯವಸ್ಥೆ ಇವುಗಳಂತಹ ಕಾರ್ಯಗಳು ರಾಜ್ಯ ಮಾಡುತ್ತದೆ. ಅದರಂತೆ
ಜನ್ಮ-ಮೃತ್ಯುವಿನ ನೋಂದಣಿ, ಪ್ಯಾನ್ ಕಾರ್ಡ್ ಅಥವಾ ಆಧಾರ ಕಾರ್ಡ್ ತೆಗೆಯುವಿಕೆ, ವಿವಾಹ ನೋಂದಣಿ ಮುಂತಾದವುಗಲಾಂತಹ ವ್ಯಯಕ್ತಿಕ ಕಾರ್ಯಗಳೂ ರಾಜ್ಯಗಳು ಮಾಡುತ್ತವೆ. ರಾಜ್ಯಗಳು
ಜನತೆಗೆ ಹಕ್ಕುಗಳನ್ನು ಕೊಡುತ್ತವೆ, ನ್ಯಾಯ ಕೊಡುತ್ತವೆ ಹಾಗೂ
ಸ್ವಾತಂತ್ರ್ಯದ ಆಶ್ವಾಸನೆಯೂ ನೀಡುತ್ತದೆ.
ರಾಜ್ಯದ
ಘಟಕಗಳು
1) ಸಾರ್ವಭೌಮತ್ವ:
ಕೆಲವೊಮ್ಮೆ ಸ್ವಾತಂತ್ರ್ಯದ ಬದಲಾಗಿ ಸಾರ್ವಭೌಮ ಎಂಬ ಶಬ್ದ ಬಳಸುತ್ತಾರೆ. ಸಾರ್ವಭೌಮವು ಕಾಯದೆಯ
ಚೌಕಟ್ಟಿನಲ್ಲಿದ್ದರೆ ಸ್ವಾತಂತ್ರ್ಯ ಈ ಶಬ್ದಕ್ಕೆ ರಾಜಕೀಯ ಸ್ವರೂಪ ಬರುತ್ತದೆ. ರಾಜ್ಯ ಕಾಯದೆಯ
ದೃಷ್ಟಿಯಿಂದ ಸಾರ್ವಭೌಮ ಇರುತ್ತದೆ ಮತ್ತು ಅದಕ್ಕೆ ಸ್ವಂತ ಸಂವಿಧಾನ ಇರುತ್ತದೆ.
2) ಶಾಸನಸಂಸ್ಥೆ:
ಪ್ರತಿಯೊಂದು ಸಾರ್ವಭೌಮ ರಾಜ್ಯಕ್ಕೆ ತನ್ನದೇ ಆದ ಶಾಸನಸಂಸ್ಥೆ ಅವಶ್ಯಕವಿರುತ್ತದೆ. ಶಾಸನವು ಸಾರ್ವಭೌಮ ಹಾಗೂ ಸ್ವಾತಂತ್ರ್ಯ
ಇರಬೇಕಾಗುತ್ತದೆ. ಉದಾ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದಲ್ಲಿ ಶಾಸನಸಂಸ್ಥೆ ಇತ್ತು ಆದರೆ ಅದು
ಸ್ವಾತಂತ್ರ್ಯ ಮತ್ತು ಸಾರ್ವಭೌಮ ಆಗಿರಲಿಲ್ಲ. ಆದ್ದರಿಂದಲೇ ಸ್ವಾತಂತ್ರ್ಯಪ್ರಾಪ್ತಿಗಿಂತ ಮುಂಚೆ
ಭಾರತವು ರಾಜ್ಯವಾಗಿರಲಿಲ್ಲ. ಶಾಸನಸಂಸ್ಥೆಯ ಸ್ವರೂಪದಲ್ಲಿ ಕಾರ್ಯಕಾರಿ ಮಂಡಲ, ಕಾಯದೆ ಮಂಡಲ, ನ್ಯಾಯಮಂಡಲ,
ನೋಕರಶಾಹಿ ಇತ್ಯಾದಿ ಘಟಕಗಳ ಸಮಾವೇಶವಾಗುತ್ತದೆ.
3) ಜನಸಂಖ್ಯೆ:
ರಾಜ್ಯದ ಅಸ್ತಿತ್ವಕ್ಕಾಗಿ ಜನರು ಅವಶ್ಯಕವಿರುತ್ತಾರೆ. ಜನರಲ್ಲಿ ಅನೇಕ
ಪ್ರಕಾರದ ವಿವಿಧತೆ ಇರಬಹುದಾಗಿದೆ. ಅದು ಭಾಷಿಕ, ಧಾರ್ಮಿಕ, ಸಂಸ್ಕೃತಿಕ, ವಂಶಿಕ ಇತ್ಯಾದಿ ಸ್ವರೂಪದ್ದು ಇರಬಹುದು.
ಅಂದರೆ ಯಾವುದೇ ರಾಜ್ಯದಲ್ಲಿ ಅನೇಕ ‘ರಾಷ್ಟ್ರಗಳ’ ಸಮಾವೇಶ ಇರಬಹುದು. ಉದಾ. ಸೋವ್ಹಿಯತ್ ರಾಶಿಯಾದಲ್ಲಿ ಅನೇಕ ರಾಷ್ಟ್ರೀಯ ಜನರ
ಸಮಾವೇಶವಿದೆ. ರಶಿಯನ್ ಲಿಥುಆನಿಯನ್, ಲಾಟವಿಯನ್, ಇಸ್ಟೋನಿಯನ್, ಇತ್ಯಾದಿಗಳು, ಅದರಂತೆ
ಯುನೈಟೆಡ್ ಕಿಂಗಡಮದಲ್ಲಿ ಇಂಗ್ಲಂಡ್, ಸ್ಕೋಟ್ಲ್ಯಾಂಡ್, ವೇಲ್ಸ್, ಉತ್ತರ ಆಯರ್ಲ್ಯಾಂಡ್ ಈ ರಾಷ್ಟ್ರಗಳ ಸಮಾವೇಶ
ಇರುತ್ತದೆ.
4) ಭೂಪ್ರದೇಶ:
ರಾಜ್ಯದ ಸೀಮೆಗೆ
ಹೊಂದಿಕೊಂಡಿರುವ ಭೌಗೋಳಿಕ ಪ್ರದೇಶವೆಂದರೆ ಭೂಪ್ರದೇಶ ಹೌದು. ರಾಜ್ಯಕ್ಕೆ ನಿಶ್ಚಿತವಾದ ಭೂಪ್ರದೇಶ
ಇರುವುದು ಅವಸ್ಜ್ಯಕವಾಗಿದೆ. ಯಾವ ಭೂಪ್ರದೇಶದ ಮೇಲೆ ರಾಜ್ಯಕ್ಕೆ ಶಾಸನ ಮಾಡುವ ಅಧಿಕಾರವಿದೆಯೋ ಆ
ಕ್ಷೇತ್ರಕ್ಕೆ ರಾಜ್ಯದ ಅಧಿಕಾರ ಕ್ಷೇತ್ರ ಎಂದು ಹೇಳುತ್ತಾರೆ. ಅಧಿಕಾರ ಕ್ಷೇತ್ರದಲ್ಲಿ
ರಾಜ್ಯಕ್ಕೆ ನಿರ್ಣಯ ತೆಗೆದುಕೊಳ್ಳುವ ಕಾನುನಾತ್ಮಕ ಅಧಿಕಾರ ಇರುತ್ತದೆ.
ಪ್ರ. 6. ರಾಜ್ಯ ಹಾಗೂ ಶಾಸನಸಂಸ್ಥೆ ಇವುಗಳಲ್ಲಿಯ ವ್ಯತ್ಯಾಸ ಬರೆಯಿರಿ.
|
ರಾಜ್ಯ
|
ಶಾಸನಸಂಸ್ಥೆ |
|
ರಾಜ್ಯ
ಇದೊಂದು ಅಮೂರ್ತ ಸ್ವರೂಪದ ಸಂಕಲ್ಪನೆಯಾಗಿದೆ. |
ಶಾಸನಸಂಸ್ಥೆ
ಇದು ಮೂರ್ತ ಸ್ವರೂಪದ ಸಂಕಲ್ಪನೆಯಾಗಿದೆ. |
|
ಶಾಸನಸಂಸ್ಥೆಗಿಂತ
ರಾಜ್ಯದ ಸ್ವರೂಪ ವ್ಯಾಪಕವಾಗಿದೆ. ಅದರಲ್ಲಿ ಎಲ್ಲ ಸಾರ್ವಜನಿಕ ಸಂಸ್ಥೆಗಳು,
ನಾಗರೀಕರ ಸಮಾವೇಶವಾಗುತ್ತದೆ. |
ಶಾಸನಸಂಸ್ಥೆ
ಇದು ರಾಜ್ಯದ ಒಂದು ಭಾಗವಾಗಿದೆ. |
|
ರಾಜ್ಯವು
ಕಾಯಮಸ್ವರೂಪದ್ದು ಆಗಿದೆ. |
ಶಾಸನಸಂಸ್ಥೆ
ಇದು ನಿಶ್ಚಿತ ಕಾಲಾವಧಿಗಾಗಿ ಇರುತ್ತದೆ. ಶಾಸನವ್ಯವಸ್ಥೆಯಲ್ಲಿ ಬದಲಾವಣೆ ಆಗಿ ಸರ್ಕಾರ
ಬಡಲಗಬಹುದು. |
|
ರಾಜ್ಯ
ಇದು ವ್ಯಕ್ತಿನಿರಪೇಕ್ಷ ಇರುತ್ತದೆ. ಅದು ರಾಜಕೀಯ ದೃಷ್ಟಿಯಿಂದ ಸ್ಥಿರವಾಗಿರುತ್ತದೆ. |
ಶಾಸನಸಂಸ್ಥೆ
ಪಕ್ಷಗಳ ವಿಚಾರಪ್ರಣಾಳಿಯ ಮೇಲೆ ಆಧಾರಿತ ಅಜೆಂಡಾ ಇರುತ್ತದೆ. |
|
ರಾಜ್ಯ
ಇದು ಸಾರ್ವಭೌಮ ಇರುತ್ತದೆ. |
ಶಾಸನಕ್ಕೆ
ರಾಜ್ಯದ ಕಡೆಯಿಂದ ಅಧಿಕಾರ ಪ್ರಾಪ್ತವಾಗುತ್ತವೆ. ರಾಜ್ಯದ ಅಧಿಕಾರದ ಪಾಲನೆ ಪ್ರತ್ಯಕ್ಷವಾಗಿ
ಶಾಸನಸಂಸ್ಥೆ ಮಾಡುತ್ತದೆ. |
ಉಪಕ್ರಮ: ವಿಶ್ವದ
ನಕಾಶೆಯಲ್ಲಿ ಚಿಕ್ಕ
ಭೂಪ್ರದೇಶ ಮತ್ತು ದೊಡ್ಡ ಭೂಪ್ರದೇಶವನ್ನು ಹೊಂದಿರುವ ರಾಜ್ಯಗಳನ್ನು ತೋರಿಸಿರಿ.
2. ಸ್ವಾತಂತ್ರ್ಯ
ಹಾಗೂ ಹಕ್ಕುಗಳು
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು
ಗುರುತಿಸಿ ವಿಧಾನಗಳನ್ನು ಪೂರ್ಣಗೊಳಿಸಿರಿ.
1. 'ಆನ್
ಲಿಬರ್ಟಿ' ಪುಸ್ತಕವನ್ನು
............... ಇವರು ಬರೆದವರು.
(ರಾಬರ್ಟ್ ನೊಜಿಕ್, ಥಾಮಸ್ ಹಾಬ್ಸ್, ಜೆ.ಎಸ್. ಮಿಲ್, ಇಸೈಯಾ ಬರ್ಲಿನ್)
2. 'ಸ್ವರಾಜ' ಎಂಬ ಸಂಕಲ್ಪನೆಯನ್ನು
............. ಇವರು ಪ್ರಸ್ತಾಪಿಸಿದವರು.
(ಮಹಾತ್ಮ ಗಾಂಧಿ, ಮಹಾತ್ಮ ಫುಲೆ, ಡಾ. ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್)
(ಬ) ಸರಿಯಾದ ಕಾರಣವನ್ನು ಆರಿಸುವ ಮೂಲಕ ಹೇಳಿಕೆಯನ್ನು ಪೂರ್ಣಗೊಳಿಸಿ.
ರಾಜ್ಯವು ಸ್ವಾತಂತ್ರ್ಯಕ್ಕೆ ಅಡೆತಡೆಗಳನ್ನು ಹಾಕಬಾರದು ಎಂಬ ತತ್ವವನ್ನು ಜೆರೆಮಿ
ಬೆಂಥಮ್ ಪ್ರಸ್ತಾಪಿಸಿದರು. ಕಾರಣ-
(ಎ) ರಾಜ್ಯ ನಮಗೆ ಸ್ವಾತಂತ್ರ್ಯ ನೀಡುವುದಿಲ್ಲ.
(ಬಿ)
ವ್ಯಕ್ತಿ ತನ್ನ ಸ್ವಂತ ಹಿತಾಸಕ್ತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ.
(ಸಿ) ಸ್ವಾತಂತ್ರ್ಯವು ಅಡೆತಡೆಗಳಿಂದ ಮುಕ್ತವಾಗಿರುವ
ಸ್ಥಿತಿ.
ಉತ್ತರ: (ಬಿ) ವ್ಯಕ್ತಿ ತನ್ನ ಸ್ವಂತ
ಹಿತಾಸಕ್ತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ.
(ಕ) ನೀಡಿರುವ ಹೇಳಿಕೆಗಳಿಗೆ ಸೂಕ್ತವಾದ ಸಂಕಲ್ಪನೆಯನ್ನು ಬರೆಯಿರಿ.
1. 86 ನೇ
ತಿದ್ದುಪಡಿಯ ಮೂಲಕ ಭಾರತದ ಸಂವಿಧಾನದಲ್ಲಿ ಸೇರಿಸಲಾದ ಮೂಲಭೂತ ಹಕ್ಕುಗಳು-
ಉತ್ತರ: ಶಿಕ್ಷಣದ ಹಕ್ಕು
2. ವ್ಯಕ್ತಿಯ
ಮತ್ತು ಸಮಾಜದ ಸದಸ್ಯರ ಆತ್ಮಸಾಕ್ಷಿಯನ್ನು ಆಧರಿಸಿದ ಹಕ್ಕುಗಳು-
ಉತ್ತರ: ನೈತಿಕ ಹಕ್ಕು
ಪ್ರಶ್ನೆ.2 (ಅ) ಈ ಕೆಳಗಿನ ಸಂಕಲ್ಪನೆ ರೇಖಾಚಿತ್ರವನ್ನು ಪೂರ್ಣಗೊಳಿಸಿ.
1. ಶೋಷಣೆಯ
ವಿರುದ್ಧದ ಹಕ್ಕು
2. ಸಮತೆಯ
ಹಕ್ಕು
3. ಸ್ವಾತಂತ್ರ್ಯದ
ಹಕ್ಕು
4. ಸಂಸ್ಕೃತಿಕ
ಹಾಗೂ ಶೈಕ್ಷಣಿಕ ಹಕ್ಕು
5. ಧಾರ್ಮಿಕ
ಸ್ವಾತಂತ್ರ್ಯದ ಹಕ್ಕುಗಳು
6. ಸಾಂವಿಧಾನಿಕ
ಸಮಸ್ಯೆಗಳ ಪರಿಹಾರದ ಹಕ್ಕುಗಳು
ಪ್ರಶ್ನೆ.3 ಕೆಳಗಿನ ವಿಧಾನ ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
ವೈಧಾನಿಕ
ಹಕ್ಕುಗಳು
ಸಾರ್ವತ್ರಿಕವಿರುವುದಿಲ್ಲ.
ಉತ್ತರ:
ಈ ವಿಧಾನ ಸರಿಯಾಗಿದೆ. ಏಕೆಂದರೆ ಪ್ರತಿಯೊಂದು ದೇಶದ ಸಂವಿಧಾನವು ಅವರ ನಗರಿಕರಿಗೆ ಯಾವ
ಹಕ್ಕುಗಳನ್ನು ಕೊಡಬೇಕು ಎಂಬುದನ್ನು ನಿರ್ಧಾರಮಾಡುತ್ತದೆ.
ಪ್ರಶ್ನೆ.4 ಪರಸ್ಪರ ಸಂಬಂಧವನ್ನು ವಿವರಿಸಿ.
1. ಥಾಮಸ್
ಹಾಬ್ಸ್ ಮತ್ತು ಜಾನ್ ಲಾಕ್ ಅವರ ಸ್ವಾತಂತ್ರ್ಯದ ಪರಿಕಲ್ಪನೆಗಳು
ಉತ್ತರ: ಥಾಮಸ್ ಹಾಬ್ಸ್ ಇವರ ಪ್ರಕಾರ ಸ್ವಾತಂತ್ರ್ಯವು
ಮನುಷ್ಯನ ನೈಸರ್ಗಿಕ ಅಧಿಕಾರವಿದೆ. ಯಾವುದೇ ಕೃತಿ ಮಾಡಲು ವ್ಯಕ್ತಿಯ ಮೇಲೆ ಯಾವುದೇ ಬಂಧನ ಇಲ್ಲದಿರುವುದು
ಅಂದರೆ ಸ್ವಾತಂತ್ರ್ಯ. ಸ್ವಾತಂತ್ರ್ಯ ಪಡೆಯಲು ಮನುಷ್ಯನಿಗೆ ಭಯ ಮತ್ತು ಅವಶ್ಯಕತೆಗಳು ಪ್ರೇರಣೆ
ನೀಡುತ್ತವೆ. ಎಂದು ಥಾಮಸ್ ಹಬ್ದ್ ಹೇಳಿದ್ದಾರೆ.
ಜಾನ್
ಲಾಕ್ ಇವರು ನೈತಿಕತೆಯ ಆಧಾರದ ಮೇಲೆ ಸ್ವಾತಂತ್ರ್ಯದ ಸಂಕಲ್ಪನೆ ಮಂಡಿಸಿದ್ದಾರೆ. ನೈತಿಕ
ದೃಷ್ಟಿಯಿಂದ ವ್ಯಕ್ತಿಯು ಇನ್ನೊಬ್ಬರ ಜೀವಕ್ಕೆ ಅಥವಾ ಸ್ವಾತಂತ್ರ್ಯದ ಅಧಿಕಾರಕ್ಕೆ ಹನಿಯಾಗದಂತೆ
ವರ್ತನೆ ಮಾಡಬೇಕು. ಪ್ರತಿಯೊಬ್ಬರು ಸಮತೆಯ ತತ್ವದ ಉಲ್ಲಂಘನೆಯನ್ನು ಮಾಡದೆ ಸ್ವಾತಂತ್ರ್ಯವನ್ನು
ಉಪಭೋಗಿಸಬೇಕು ಎಂದು ಹೇಳಿದರು.
2. ಭಾರತೀಯ
ಸಂವಿಧಾನ ಹಾಗೂ ಸ್ವಾತಂತ್ರ್ಯ
ಉತ್ತರ: ಭಾರತೀಯ ಸಂವಿಧಾನ ಹಾಗೂ ಸ್ವಾತಂತ್ರ್ಯ
ಇವುಗಳಲ್ಲಿ ಘನಿಷ್ಠವಾದ ಸಂಬಂಧವಿದೆ. ಸಂವಿಧಾನವು ನಾಗರಿಕರಿಗೆ ವಿವಿಧ ಪ್ರಕಾರದ ಮೂಲಭೂತ
ಅಧಿಕಾರಗಳನ್ನು ಕೊಟ್ಟಿದೆ. ಅವುಗಳಲ್ಲಿ ಸ್ವಾತಂತ್ರ್ಯದ ಸಮಾವೇಶವು ಆಗಿರುತ್ತದೆ.
ಸ್ವಾತಂತ್ರ್ಯದಿಂದ ನಾಗರಿಕರಿಗೆ ವಿವಿಧ ಕ್ಷೇತ್ರದಲ್ಲಿ ನಿರ್ಣಯ ತೆಗೆದುಕೊಳ್ಳುವ ಹಾಗೂ ತಮ್ಮ
ಬದುಕನ್ನು ಬದುಕುವ ಅವಕಾಶ ದೊರೆಯುತ್ತದೆ.
ಭಾರತೀಯ
ಸಂವಿಧಾನದಲ್ಲಿಯ ಸ್ವಾತಂತ್ರ್ಯದ ಸ್ವರೂಪ:
1) ಮೂಲಭೂತ
ಹಕ್ಕುಗಳು: ಸಂವಿಧಾನವು ನಾಗರಿಕರಿಗೆ ಭಾಷಣ, ಅಭಿವ್ಯಕ್ತಿ. ವಿಶ್ವಾಸ, ಉಪಾಸನ,
ವೇಷಭೂಷಣ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ನಿಂದಿರುತ್ತದೆ.
2) ಗಣರಾಜ್ಯ:
ಸಂವಿಧಾನವು ಸಂಸದೀಯ ಶಾಸನವ್ಯವಸ್ಥೆ ಹೊಂದಿರುತ್ತದೆ.
ಅದರಿಂದ ನಾಗರಿಕರಿಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಾಗೂ ಶಾಸನದ ಮೇಲೆ
ನಿಯಂತ್ರಣೆಯನ್ನು ಇಡುವ ಹಕ್ಕು ಪ್ರಾಪ್ತವಾಗಿದೆ.
3) ನ್ಯಾಯಾಲಯ:
ನಾಗರಿಕರಿಗೆ ನ್ಯಾಯ ದೊರಕಿಸಲು ನ್ಯಾಯಾಲಯಕ್ಕೆ ಹೋಗುವ ಅಧಿಕಾರವಿದೆ.
ಆದ್ದರಿಂದ ಜನತೆಗೆ ತಮ್ಮ ಹಕ್ಕುಗಳ ಸಂರಕ್ಷಣೆ ಮಾಡಿಕೊಳ್ಳಲು ಬರುತ್ತದೆ.
ಪ್ರಶ್ನೆ.5 ಕೆಳಗಿನ ಪ್ರಶ್ನೆಗಳಿಗೆ
ಉತ್ತರಗಳನ್ನು ಬರೆಯಿರಿ.
1. ಮಹಾತ್ಮ
ಗಾಂಧಿಯವರ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ವಿವರಿಸಿರಿ.
ಉತ್ತರ: ಮಹಾತ್ಮ ಗಾಂಧಿಯವರು ತಮ್ಮ ಸ್ವಾತಂತ್ರ್ಯವಿಷಯಕ
ವಿಚಾರವನ್ನು ಹಿಂದ ಸ್ವರಾಜ್’ ಎಂಬ ಪುಸ್ತಕದಲ್ಲಿ ಮಂಡಿಸಿದ್ದಾರೆ.
ಸ್ವತಂತ್ರ್ಯಕ್ಕಾಗಿ ಅವರು ಸ್ವರಾಜ್ ಎಂಬ ಸಂಕಲ್ಪನೆಯನ್ನು ಬಳಸಿದ್ದಾರೆ. ಸ್ವರಾಜ್ ಈ
ಸಂಕಲ್ಪನೆಯಲ್ಲಿ ‘ಸ್ವ’ ಹಾಗೂ ‘ರಾಜ್’ ಎಂಬ ಎರಡು ಪದಗಳು ಸಮಾವಿಷ್ಟ ಇವೆ. ಇದರ ಅರ್ಥ ಸ್ವಂತದ
ರಾಜ್ಯ ಎಂದಾಗುತ್ತದೆ. ಗಾಂಧೀಜಿಯವರ ಸ್ವಾತಂತ್ರ್ಯದ ಸಂಕಲ್ಪನೆ ವ್ಯಾಪಕವಾಗಿದೆ. ಕೇವಲ ಬ್ರಿಟಿಷ್
ಆಳ್ವಿಕೆಯಿಂದ ಸ್ವಾತಂತ್ರ್ಯ ಅಂತ ಅಲ್ಲದೆ ಪಾಶ್ಚಿಮಾತ್ಯ ಸಾಂಸ್ಕೃತಿಕ ವರ್ಚಸ್ವದಿಂದಲೂ ಮುಕ್ತತೆ
ಎಂದು ಅಭಿಪ್ರೇತವಿರುವ ಪದ ಸ್ವರಾ ಜ್ ಆಗಿದೆ. ಸ್ವಯಂ ಶಾಸನ, ಸ್ವಯಂ
ಶಿಸ್ತು, ಮನವಿ ಮೌಲ್ಯಗಳು ಇತ್ಯಾದಿ ತತ್ವಗಳ ಮಹತ್ವವನ್ನು ಗಾಂಧೀಜಿಯವರ
ಸ್ವರಾಜ್ ಸಂಕಲ್ಪನೆಯಲ್ಲಿ ಕೊಡಲಾಗಿದೆ.
2. ಮಾನವ
ಹಕ್ಕುಗಳ ಪರಿಕಲ್ಪನೆಯನ್ನು ಚರ್ಚಿಸಿ.
ಉತ್ತರ: ಪ್ರತಿಯೊಬ್ಬ ವ್ಯಕ್ತಿಗೆ ಮಾನವ ಎಂದು ಕೆಲವು
ಹಕ್ಕುಗಳು ಪ್ರಾಪ್ತವಾಗಿವೆ ಅವುಗಳಿದೆ ಮನವಿ ಹಕ್ಕುಗಳು ಎಂದು ಹೇಳುತ್ತಾರೆ. ಅವು ಮನುಷ್ಯನಿಗೆ
ಹುಟ್ಟುನಿಂದಲೇ ದೊರೆಯುತ್ತವೆ. ಅವುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಆಗುವುದಿಲ್ಲ. ಯಾವುದೇ
ಸಮಾಜ ಅಥವಾ ರಾಜ್ಯಕರ್ತನಿಂದ ಆ ಹಕ್ಕುಗಳು ದೊರೆತಿರುವುದಿಲ್ಲ. ಮನವಿ ಹಕ್ಕುಗಳು
ನೈಸರ್ಗಿಕವಾಗಿರುತ್ತವೆ. ಅವು ನ್ಯಾಯದ ಮೇಲೆ ಆಧಾರಿಸಿರುತ್ತವೆ. ಸಾರ್ವತ್ರಿಕವಾಗಿದ್ದು ಸಾಮಾಜಿಕ
ಭೇದಭಾವ ಮಾಡದೆ ಎಲ್ಲ ಮಾನವ ಜನಾಂಗಕ್ಕೆ ಆ ಹಕ್ಕುಗಳು ನೀಡಲಾಗಿರುತ್ತವೆ. ಮನುಷ್ಯನಲ್ಲಿಯ ಮನವಿ
ಗುಣಗಳ, ಜಾಣತನದ ಹಾಗೂ ಕೌಶಲ್ಯಗಳ ವಿಕಾಸ ಮಾಡುವುದಕ್ಕಾಗಿ ಈ ಹಕ್ಕುಗಳ ಅವಶ್ಯಕತೆ ಇರುತ್ತದೆ.
3. ಇಸಾಯಾ
ಬರ್ಲಿನ್ ಅವರ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ವಿವರಿಸಿ.
ಉತ್ತರ: ಇಸಾಯಾ ಬರ್ಲಿನ್ ಇವರು 1958ರಲ್ಲಿ
ಸ್ವಾತಂತ್ರ್ಯದ ಎರಡು ಸಂಕಲ್ಪನೆಗಳು’ ಎಂಬ ನಿಬಂಧದಲ್ಲಿ ನಕಾರಾತ್ಮಕ
ಹಾಗೂ ಸಕಾರಾತ್ಮಕ ಸ್ವಾತಂತ್ರ್ಯ ಎಂಬ ಸಂಕಲ್ಪನೆಗಳನ್ನು ಮಂಡಿಸಿದ್ದಾರೆ. ಸಕಾರಾತ್ಮಕ
ಸ್ವಾತಂತ್ರ್ಯವು ಆಧುನಿಕ ಉದಾರಮತವಾದಿ ವಿಚಾರಪ್ರಣಾಳಿಕೆಯಿಂದ ಹುಟ್ಟಿಕೊಂಡಿದ್ದರೆ, ನಕಾರಾತ್ಮಕ ಸ್ವಾತಂತ್ರ್ಯವು ಅಭಿಜಾತ ಉದಾರಮತವಾದ ಹಾಗೂ ನೂತನ ಉದಾರಮತವಾದ ಎಂಬ ಎರಡು
ವಿಚಾರಗಳಿಂದ ಉಗಮಹೊಂದಿರುತ್ತವೆ. ಸ್ವಾತಂತ್ರ್ಯವಿ ಬಂಧನಮುಕ್ತ ಇರುತ್ತದೆ ಎಂದು ಇಸಾಯಾ ಬರ್ಲಿನ್
ಸ್ಪಷ್ಟಮಾಡಿದ್ದಾರೆ.
ಸಕಾರಾತ್ಮಕ ಸ್ವಾತಂತ್ರ್ಯದ ಬಗೆಗಿನ ವಿಧಾನ:
ನಾನೇ ನನ್ನ ಮಾಲೀಕನು.
ನಕಾರಾತ್ಮಕ ಸ್ವಾತಂತ್ರ್ಯದ ಬಗೆಗಿನ ವಿಧಾನ:
ನಾನು ಯಾವುದೇ ವ್ಯಕ್ತಿಯ ಗುಲಾಮನಲ್ಲ.
ಪ್ರಶ್ನೆ.6 ಕೊಟ್ಟಿರುವ ಅಂಶಗಳ ಆಧಾರದ ಮೇಲಿಂದ ಕೆಳಗಿನ ಪ್ರಶ್ನೆಗೆ
ಉತ್ತರಗಳನ್ನು ಬರೆಯಿರಿ.
ಹಕ್ಕುಗಳ ಪರಿಕಲ್ಪನೆಯನ್ನು ವಿವರಿಸಿ.
(ಅ)
ಹಕ್ಕುಗಳ ಅರ್ಥ ಮತ್ತು ವರ್ಗೀಕರಣ (ಬ) ನೈಸರ್ಗಿಕ ಹಕ್ಕುಗಳು (ಕ) ನೈತಿಕ ಹಕ್ಕುಗಳು (ಡ) ವೈಧಾನಿಕ ಹಕ್ಕು, (ಇ) ಮಾನವನ ಹಕ್ಕುಗಳು
(ಅ)
ಹಕ್ಕುಗಳ ಅರ್ಥ ಮತ್ತು ವರ್ಗೀಕರಣ: ಮನುಷ್ಯನಿಗೆ ಬದುಕುವ
ಸಲುವಾಗಿ, ಉತ್ತಮ ವ್ಯಕ್ತಿಮತ್ವ ವಿಕಾಸಕ್ಕಾಗಿ ಕೆಲವು ಹಕ್ಕುಗಳ ಅಗತ್ಯವಿರುತ್ತದೆ. ಸಾಮಾಜಿಕ
ಬದುಕಿನಲ್ಲಿ ಹಕ್ಕುಗಳು ಇಲ್ಲದೆ ಉತ್ತಮವಾಗಿ ನಾವು ಬದುಕಲು ಸಾಧ್ಯವಿಲ್ಲ ಎಂದು ಹಕ್ಕುಗಳ ಬಗ್ಗೆ
ಹರಾಲ್ಡ್ ಲಾಸ್ಕಿ ಹೇಳುತ್ತಾರೆ. ಹಕ್ಕುಗಳನ್ನು ಕೆಳಗಿನಂತೆ ವರ್ಗೀಕರಣ ಮಾಡಲಾಗಿದೆ:
1)ನೈಸರ್ಗಿಕ
ಹಕ್ಕುಗಳು: ಮಾನವನ ಸ್ವಭಾ ಹಾಗೂ ವಿವೇಕದ ಅವಿಭಾಜ್ಯ ಅಂಗವೆಂದು
ನೈಸರ್ಗಿಕ ಹಕ್ಕುಗಳ ಬಗ್ಗೆ ಹೇಳಬಹುದು. ಅವುಗಳ ಸ್ವರೂಪ ಸಾರ್ವತ್ರಿಕವಾಗಿದೆ.
2)ನೈತಿಕ ಹಕ್ಕುಗಳು: ನೈತಿಕ
ಹಕ್ಕುಗಳು ವ್ಯಕ್ತಿ ಹಾಗೂ ಸಮಾಜದ ಸದ್ಸದವಿವೇಕದ ಮೇಲೆ ಆಧಾರಿಸಿಋತ್ತವೆ. ಉದಾ. ಶಿಕ್ಷಕರಿಗೆ, ಹಿರಿಯರಿಗೆ ಗೌರವ ನೀಡುವುದು ನೈತಿಕ ಹಕ್ಕು ಆಗಿದೆ.
3)ವೈಧಾನಿಕ ಹಕ್ಕುಗಳು: ವೈಧಾನಿಕ
ಹಕ್ಕುಗಳು ರಾಜ್ಯದಿಂದ ಜನತೆಗೆ ನೀಡಲಾಗಿರುತ್ತವೆ. ಈ ಹಕ್ಕುಗಳ ಸ್ವರೂಪ ಸಾರ್ವತ್ರಿಕ
ಇರುವುದಿಲ್ಲ. ಕಾಯದೆಯ ಭಾಷೆಯಲ್ಲಿ ಸಂಹಿತಿಕರಣ ಮಾಡಲಾಗಿರುತ್ತದೆ. ಬೇರೆ ಬೇರೆ ದೇಶಗಳ
ಸಂವಿಧಾನವು ಆಯಾ ದೇಶಗಳ ಜನತೆಗೆ ಯಾವ ಹಕ್ಕುಗಳು ಕೊಡಬೇಕು ಎಂಬುದನ್ನು ನಿರ್ಧಾರ ಮಾಡುತ್ತವೆ. ವೈಧಾನಿಕ ಹಕ್ಕುಗಳ ಇನ್ನೂ ಎರಡು ಪ್ರಕರಗಳಿವೆ: ಅ)
ನಾಗರಿ ಹಕ್ಕುಗಳು: ನಾಗರಿ ಹಕ್ಕುಗಳು ವ್ಯಕ್ತಿ ಹಾಗೂ ವ್ಯಕ್ತಿಯ ಸಂಪತ್ತುಗಾಳಿಗೆ
ಸಂಬಂಧಿಸಿರುತ್ತವೆ. ನಾಗರಿ ಹಕ್ಕುಗಳಲ್ಲಿ ಜೀವಿತದ ಹಕ್ಕು,
ಸ್ವಾತಂತ್ರ್ಯದ ಹಕ್ಕು, ಸಮತೆಯ ಹಕ್ಕು ಹಾಗೂ ಸಂಪತ್ತಿನ ಹಕ್ಕು ಇವುಗಳ
ಸಮಾವೇಶವಾಗುತ್ತವೆ. ಆ) ರಾಜಕೀಯ ಹಕ್ಕುಗಳು: ರಾಜಕೀಯ ಹಕ್ಕುಗಳು ವ್ಯಕ್ತಿಗೆ ರಾಜಕೀಯ
ಪ್ರಕ್ರಿಯೆಯಲ್ಲಿ ಸಕ್ರಿಯ ಸಹಭಾಗಿಯಾಗಲು ಅವಕಾಶ ನೀಡುತ್ತವೆ. ಮತದಾನದ ಹಕ್ಕು, ಚುನಾವಣೆಗೆ ನಿಲ್ಲುವ ಹಕ್ಕು, ಸಾರ್ವಜನಿಕ ಪದ ಸ್ವೀಕರಿಸುವ
ಹಕ್ಕು, ಶಾಸನದ ಮೇಲೆ ಟೀಕೆ ಮಾಡುವ ಹಕ್ಕು,
ಇತ್ಯಾದಿಗಳ ಸಮಾವೇಶ ರಾಜಕೀಯ ಹಕ್ಕುಗಳಲ್ಲಿ ಆಗುತ್ತವೆ.
4)ಮಾನವಿ ಹಕ್ಕುಗಳು: ಪ್ರತಿಯೊಬ್ಬ
ವ್ಯಕ್ತಿಗೆ ಮಾನವನೆಂದು ಕೆಲವು ಹಕ್ಕುಗಳು ದೊರೆಯುತ್ತವೆ ಅವುಗಳಿಗೆ ಮಾನವಿ ಹಕ್ಕುಗಳು
ಎನ್ನುವರು. ಆ ಹಕ್ಕುಗಳು ನಮಗೆ ಹುಟ್ಟಿನಿಂದಲೇ ದೊರೆಯುತ್ತವೆ. ಅವುಗಳನ್ನು ಯಾರಿಂದಲೂ
ಕಸಿದುಕೊಳ್ಳಲು ಬರುವುದಿಲ್ಲ. ಅವು ನೈಸರ್ಗಿಕ ಹಕ್ಕುಗಳಾಗಿರುತ್ತವೆ.
ಉಪಕ್ರಮ: ಭಾರತದಲ್ಲಿನ
ನಾಗರಿಕ ಹಕ್ಕುಗಳನ್ನು ಪಟ್ಟಿ ಮಾಡಿ.
- ಜೀವನ ಹಕ್ಕು (Right to life)
- ವಯಕ್ತಿಕ ಸ್ವಾತಂತ್ರ್ಯದ ಹಕ್ಕು (Right to personal freedom)
- ಕುಟುಂಬ ಜೀವನದ ಹಕ್ಕು (Right to Family life)
- ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (Right to freedom of religion)
- ಚಿಂತನೆ ಮತ್ತು ಅಭಿವ್ಯಕ್ತಿ
ಸ್ವಾತಂತ್ರ್ಯದ ಹಕ್ಕು
- ಚಲನೆಯ, ಸಂಘಟನೆ ಹಾಗೂ ಸಭೆಗಳ ಸ್ವಾತಂತ್ರ್ಯದ ಹಕ್ಕು
- ಶಿಕ್ಷಣದ ಹಕ್ಕು (Right to Education)
- ವೃತ್ತಿ ಮತ್ತು ಉದ್ಯೋಗದ ಹಕ್ಕು (Right to freedom of occupation and vocation)
- ಮಾನಭಂಗವಾಗುವ ಬಂಧನೆಯಿಂದ ಮುಕ್ತಿಯ
ಹಕ್ಕು
- ನ್ಯಾಯ ಪಡೆಯುವ ಹಕ್ಕು (Right to justice)
3. ಸಮತೆ ಹಾಗೂ
ನ್ಯಾಯ
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು
ಗುರುತಿಸಿ ವಿಧಾನಗಳನ್ನು ಪೂರ್ಣಗೊಳಿಸಿರಿ.
1. ............... ಇದು
ರಾಜಕೀಯ ಸಮಾನತೆಯು ಅಡಿಪಾಯವಾಗಿದೆ.
(ಪ್ರಜಾಪ್ರಭುತ್ವ, ಸರ್ವಾಧಿಕಾರಶಾಹಿ, ಮಿಲಿಟರಿ ಆಳ್ವಿಕೆ, ರಾಜಪ್ರಭುತ್ವ)
2. ಜಾನ್ ರಾಲ್ಸ್ ....... ನ್ಯಾಯದ
ಪ್ರತಿಪಾದಕರಾಗಿದ್ದರು.
(ವಿತರಣಾತ್ಮಕ, ರಾಜಕೀಯ, ಆರ್ಥಿಕ, ಲಿಂಗಭಾವಾತ್ಮಕ)
(ಬ) ನೀಡಿರುವ ಹೇಳಿಕೆಗಳಿಗೆ
ಸೂಕ್ತವಾದ ಪರಿಕಲ್ಪನೆಗಳನ್ನು ಬರೆಯಿರಿ.
1. ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ
ಪ್ರತಿಯೊಬ್ಬರೂ ಅವಕಾಶವನ್ನು ಪಡೆಯಬೇಕು ಎಂದು ನಂಬುವ ಸಮಾನತೆಯ ತತ್ವ –
ಉತ್ತರ: ಸಮಾನ ಸಂಧಿಯ ತತ್ವ
2.
ಪ್ರತಿಯೊಬ್ಬ ನಾಗರಿಕನು ಆಡಳಿತದಲ್ಲಿ
ಭಾಗವಹಿಸುವ ಹಕ್ಕನ್ನು ಹೊಂದಿರುವ ಸಮಾನತೆಯ ಪ್ರಕಾರ –
ಉತ್ತರ: ರಾಜಕೀಯ ಸಮತೆ
3.
ಆರ್ಥಿಕ ಶೋಷಣೆಯ ಕೊರತೆ –
ಉತ್ತರ: ಆರ್ಥಿಕ ಸಮತೆ
(ಕ) ಸರಿಯಾದ ಕಾರಣವನ್ನು ಆರಿಸುವ ಮೂಲಕ ಹೇಳಿಕೆಯನ್ನು ಪೂರ್ಣಗೊಳಿಸಿ.
1. ಅಸ್ಪೃಶ್ಯತೆಯನ್ನು ತೊಡೆದುಹಾಕಲು ಭಾರತದಲ್ಲಿ
ಕಾನೂನುಗಳನ್ನು ರಚಿಸಲಾಗಿದೆ. ಏಕೆಂದರೆ.......
(ಅ) ಅಸ್ಪೃಶ್ಯತೆಯು ರಾಜಕೀಯ
ಪರಿಕಲ್ಪನೆಯಾಗಿದೆ.
(ಬ) ಅಸ್ಪೃಶ್ಯತೆಯು ಕಾನೂನು
ಪರಿಕಲ್ಪನೆಯಾಗಿದೆ.
(ಕ) ಸಾಮಾಜಿಕ ಅಸಮಾನತೆಯನ್ನು ಕಾನೂನಿನ ಮೂಲಕ
ನಿಯಂತ್ರಿಸಲಾಗುತ್ತದೆ.
ಉತ್ತರ: (ಕ) ಸಾಮಾಜಿಕ ಅಸಮಾನತೆಯನ್ನು ಕಾನೂನಿನ ಮೂಲಕ
ನಿಯಂತ್ರಿಸಲಾಗುತ್ತದೆ.
ಪ್ರಶ್ನೆ.2 ಕೆಳಗಿನ ಪರಿಕಲ್ಪನಾ ನಕ್ಷೆಯನ್ನು ಪೂರ್ಣಗೊಳಿಸಿ.
ಪ್ರಶ್ನೆ.3 ಕೆಳಗಿನ ವಿಧಾನಗಳನ್ನು ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
1. ಪ್ರಜಾಪ್ರಭುತ್ವದಲ್ಲಿ ಸಮಾನತೆಯನ್ನು
ನಿರಾಕರಿಸಲಾಗಿದೆ.
ಉತ್ತರ: ತಪ್ಪು, ಪ್ರಜಾಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಬಂಧುತ್ವ ಎಂಬ ನಾಲ್ಕು ತತ್ವಗಳ ಮೇಲೆ ನಡೆಯುತ್ತದೆ.
2. ಸಮಾನತೆ ಒಂದು ರಾಜಕೀಯ ಗುರಿಯಾಗಿದೆ.
ಉತ್ತರ: ಈ ವಿಧಾನ ಸರಿಯಾಗಿದೆ. ಸಮಾನತೆ ಎಂದರೆ ಎಲ್ಲ
ಮಾನವರು ಅವರ ಜನಾಂಗ, ಧರ್ಮ,
ಜಾತಿಗಳನ್ನು ಲೆಕ್ಕಿಸದೆ ಸಮಾನ ಮೌಲ್ಯವನ್ನು ಹೊಂದಿದ್ದಾರೆ. ಆಧುನಿಕ ಕಾಲದಲ್ಲಿ ಸಮಾನತೆಯು
ಸಹಿಷ್ಣುತೆ ಮತ್ತು ಸಹಾನುಭೂತಿಯಂತಹ ಅಂಶಗಳನ್ನು ಒಳಗೊಂಡಿದೆ. ಸಮಾನತೆ ಇದು ಸ್ವಾತಂತ್ರ್ಯ ಮತ್ತು
ನ್ಯಾಯದ ಆಧಾರವಾಗಿದೆ ಆದ್ದರಿಂದ ಅದನ್ನು ರಾಜಕೀಯ ಗುರಿಯಾಗಿ ಪರಿಗಣಿಸಲಾಗುತ್ತದೆ.
3. ಸಾಮಾಜಿಕ ಪ್ರಜಾಪ್ರಭುತ್ವವು ರಾಜಕೀಯ
ಪ್ರಜಾಪ್ರಭುತ್ವದ ಅಡಿಪಾಯವಾಗಿದೆ.
ಉತ್ತರ: ಈ ವಿಧಾನ ಸರಿಯಾಗಿದೆ. ಸಾಮಾಜಿಕ
ಪ್ರಜಾಪ್ರಭುತ್ವ ಎಂದರೆ ಸಮಾನತೆ ಇರುವುದು, ಅಂದರೆ ಜನಾಂಗ,
ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ವ್ಯಕ್ತಿಗಳ
ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇದು ವ್ಯಕ್ತಿಯ ಘನತೆ ಯನ್ನು ಖಚಿತಪಡಿಸುತ್ತದೆ. ರಾಜಕೀಯ
ಪ್ರಜಾಪ್ರಭುತ್ವವು ಮತದಾನದ ಹಕ್ಕು, ಸರ್ಕಾರವನ್ನು ಟೀಕಿಸುವುದು
ಇತ್ಯಾದಿ ರಾಜಕೀಯ ಹಕ್ಕುಗಳಲ್ಲಿ ವ್ಯಕ್ತವಾಗುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವದ
ಅನುಪಸ್ಥಿತಿಯಲ್ಲಿ ರಾಜಕೀಯ ಪ್ರಜಾಪ್ರಭುತ್ವವು ಕಡಿಮೆ ಮೌಲ್ಯಯುತವಾಗಿರುತ್ತದೆ.
ಪ್ರಶ್ನೆ.4 ಪರಸ್ಪರ ಸಂಬಂಧವನ್ನು ವಿವರಿಸಿ.
1. ಸಮಾನತೆ ಮತ್ತು ನ್ಯಾಯ
ಉತ್ತರ: ಸಮಾನತೆ ಎಂದರೆ ಎಲ್ಲಾ ವ್ಯಕ್ತಿಗಳಿಗೂ ಅವರ
ಜನಾಂಗ,
ಧರ್ಮ, ಲಿಂಗ ಇತ್ಯಾದಿಗಳ ಬಗ್ಗೆ ಭೇದಭಾವ ಮಾಡದೆ ಸಮಾನ
ಹಕ್ಕುಗಳು ಮತ್ತು ಅವಕಾಶಗಳು ನೀಡುವುದು. ನ್ಯಾಯವು
ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಲ್ಲಬೇಕಾದ ಜವಾಬ್ದಾರಿಗಳು ಮತ್ತು ಪ್ರಯೋಜನಗಳನ್ನು ನಿಖರವಾಗಿ
ಪಡೆಯುವ ವ್ಯವಹಾರಗಳ ಸ್ಥಿತಿಯನ್ನು ಸೂಚಿಸುತ್ತದೆ. ಇದು ಸಾಮಾಜಿಕ-ಆರ್ಥಿಕ, ರಾಜಕೀಯ ಮತ್ತು ನ್ಯಾಯದ ಅನುಪಸ್ಥಿತಿಯನ್ನು ಸೂಚಿಸುತ್ತದೆ.
ಸಮಾನತೆಯ
ಅನುಪಸ್ಥಿತಿಯಲ್ಲಿ, ನ್ಯಾಯದ ನಿರಾಕರಣೆ ಇರುತ್ತದೆ
ಮತ್ತು ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತದೆ. ನ್ಯಾಯವು ವೈಯಕ್ತಿಕ ಹಕ್ಕುಗಳು ಮತ್ತು ದೊಡ್ಡ
ಸಾಮಾಜಿಕ ಹಿತಾಸಕ್ತಿಗಳ ಸಮನ್ವಯದ ಗುರಿಯನ್ನು ಹೊಂದಿದೆ.
2. ಸಾಂವಿಧಾನಿಕ ನ್ಯಾಯ ಮತ್ತು ಸಾಮಾಜಿಕ ನ್ಯಾಯ.
ಉತ್ತರ: ಕಾನೂನು ನ್ಯಾಯವು ಕಾನೂನಿನ ಅನುಷ್ಠಾನದ ಮೂಲಕ
ನ್ಯಾಯದ ಅಮೂರ್ತ ಪರಿಕಲ್ಪನೆಯ ಅನ್ವಯವಾಗಿದೆ. ನ್ಯಾಯವು ಕಾನೂನಿಗೆ ಪೂರ್ವಭಾವಿಯಾಗಿದೆ ಏಕೆಂದರೆ
ಅದು ಇಲ್ಲದೆ, ಕಾನೂನು ದಬ್ಬಾಳಿಕೆ ಮತ್ತು ದಮನದ ಸಾಧನವಾಗಬಹುದು.
ಆಸ್ಟಿನ್ ಕಾನೂನನ್ನು ಅನ್ಯಾಯವನ್ನು ನಿಗ್ರಹಿಸಲು ಮತ್ತು ನ್ಯಾಯವನ್ನು ಸ್ಥಾಪಿಸಲು ಒಂದು
ಸಾಧನವೆಂದು ಪರಿಗಣಿಸುತ್ತಾನೆ. ಕಾನೂನು ನ್ಯಾಯವು ಸ್ವತಂತ್ರ ಮತ್ತು ನಿಷ್ಪಕ್ಷಪಾತ
ನ್ಯಾಯಾಂಗವನ್ನು ಸೂಚಿಸುತ್ತದೆ, ಅದು ನ್ಯಾಯಾಂಗ ಪ್ರಕ್ರಿಯೆಗಳಿಗೆ
ನಿರ್ದಿಷ್ಟ ನಿಯಮಗಳನ್ನು ಪಾಲಿಸುತ್ತದೆ. ಯಾವುದೇ ಆರೋಪಿಯ ಮೇಲೆ ಅವನ/ಅವಳ ಮಾನವ ಹಕ್ಕುಗಳನ್ನು
ಗಮನದಲ್ಲಿಟ್ಟುಕೊಂಡು ಆರೋಪ ಹೊರಿಸಬೇಕು.
ಸಾಮಾಜಿಕ
ನ್ಯಾಯವು ಸುಧಾರಣಾವಾದಿ ಮತ್ತು ವಿತರಣಾವಾದಿ ಎರಡೂ ಆಗಿದೆ. ಇದು ಸಾಮಾಜಿಕ-ಆರ್ಥಿಕ
ದುಷ್ಕೃತ್ಯಗಳನ್ನು ತೊಡೆದುಹಾಕುವ ಮೂಲಕ ಸಾಮಾಜಿಕ ಕ್ರಮದ ಪರಿಷ್ಕರಣೆಯ ಗುರಿಯನ್ನು ಹೊಂದಿದೆ, ಉದಾಹರಣೆಗೆ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು, ಸಂವಿಧಾನದ
17 ನೇ ವಿಧಿ ಮತ್ತು ಸಂಸತ್ತು ಅಂಗೀಕರಿಸಿದ ಕಾನೂನುಗಳಿವೆ.
ಕಾರ್ಯವಿಧಾನ
ನ್ಯಾಯವು ಕಾನೂನಿನ ಮುಂದೆ ಸಮಾನತೆಯನ್ನು ಹಾಗೂ ಕಾನೂನಿನ ಸರಿಯಾದ ವ್ಯಾಖ್ಯಾನ ಮತ್ತು
ಅನ್ವಯವನ್ನು ಬಯಸುತ್ತದೆ. ಸಾಮಾಜಿಕ ನ್ಯಾಯವು ಸುಧಾರಣಾವಾದಿಯಾಗಿದೆ ಅಂದರೆ, ಸರಕು ಮತ್ತು ಸೇವೆಗಳ ಸಮಾನ ವಿತರಣೆಯಾಗಿದ್ದು, ಇದರಿಂದಾಗಿ
ಹಿಂದುಳಿದ ವರ್ಗಗಳು ಈ ವಿತರಣೆಯಲ್ಲಿ ಸಾಕಷ್ಟು ಪಾಲನ್ನು ಪಡೆಯಬಹುದು.
ಪ್ರಶ್ನೆ.5 ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.
ಜಾತಿ ತಾರತಮ್ಯವು ಸಾಮಾಜಿಕ ಸಮಾನತೆಗೆ
ಅಡ್ಡಿಯಾಗಿದೆ.
ಉತ್ತರ: ಜಾತಿ ವ್ಯವಸ್ಥೆಯು ಭಾರತೀಯ ಸಮಾಜದ ಮೂಲಭೂತ
ಲಕ್ಷಣಗಳಲ್ಲಿ ಒಂದಾಗಿದೆ. ಇದು ಸಮಾಜದ ಒಂದು ನಿರ್ದಿಷ್ಟ ವರ್ಗದಲ್ಲಿ ಒಬ್ಬ ವ್ಯಕ್ತಿಯು
ಹುಟ್ಟಿರುವುದನ್ನು ಆಧರಿಸಿ ಸಮಾಜದಲ್ಲಿ ಜಾತಿಯ ವಿಭಜನೆಗಳನ್ನು ಸೂಚಿಸುತ್ತದೆ. ಕೆಳಜಾತಿಗಳಿಗೆ
ನಿರಾಕರಿಸಲಾದ ಸವಲತ್ತುಗಳನ್ನು ಮೇಲ್ಜಾತಿಗಳು ಅನುಭವಿಸುವ ಜಾತಿ ಶ್ರೇಣಿ ವ್ಯವಸ್ಥೆ ಇತ್ತು.
ನಾಲ್ಕು ಮುಖ್ಯ ಚಾತುರ್ವರಣಗಳಲ್ಲಿಯೂ ಸಹ, ಶ್ರೇಣಿ
ವ್ಯವಸ್ಥೆಗಳು ಬೆಳೆಯಲು ಪ್ರಾರಂಭಿಸಿದವು.
ಜಾತಿವಾದವು ಸಾಮಾಜಿಕ ದುಷ್ಟತನವಾಗಿ ಪರಿಣಮಿಸಲು
ಪ್ರಾರಂಭಿಸಿತು, ಏಕೆಂದರೆ ಇದು ಅಸ್ಪೃಶ್ಯತೆ ಮತ್ತು ಕೆಳಜಾತಿಗಳ
ಶೋಷಣೆ ಮತ್ತು ಪ್ರತ್ಯೇಕತೆಗೆ ಕಾರಣವಾಯಿತು. ಅವರಿಗೆ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ
ಹಕ್ಕುಗಳನ್ನು ಹೊಂದಲು ಸಮಾನ ಅವಕಾಶಗಳನ್ನು ನಿರಾಕರಿಸಲಾಯಿತು. ಮದುವೆ ಅಥವಾ ಸಾಧನೆಯಿಂದಾಗಿ
ಜಾತಿ ಶ್ರೇಣಿಯಲ್ಲಿ ಮೇಲ್ಮುಖ ಚಲನಶೀಲತೆಯನ್ನು ಜಾತಿವಾದವು ಅನುಮತಿಸಲಿಲ್ಲ. ಜಾತಿಗಳ
ಮಿಶ್ರಣವನ್ನು ನಿಷೇಧಿಸಲಾಗಿದೆ. ಶೈಕ್ಷಣಿಕ, ರಾಜಕೀಯ ಮತ್ತು ಉದ್ಯೋಗ
ಸೌಲಭ್ಯಗಳಲ್ಲಿ ಕೆಳಜಾತಿಗಳನ್ನು ಹೆಚ್ಚಾಗಿ ತಾರತಮ್ಯ ಮಾಡಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ,
ಜಲಮೂಲಗಳು, ಆಸ್ಪತ್ರೆಗಳು ಮುಂತಾದ ಸಾರ್ವಜನಿಕ
ಸ್ಥಳಗಳಿಗೆ ಅವರಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು.
ಸಾಮಾಜಿಕ ಸಮಾನತೆ ಎಂದರೆ ಜಾತಿ ಮತ್ತು ಧರ್ಮದಂತಹ
ಅಪ್ರಸ್ತುತ ಅಂಶಗಳ ಮೇಲೆ ಯಾವುದೇ ವ್ಯಕ್ತಿ/ಗುಂಪಿನ ಪರವಾಗಿ ಅಥವಾ ತಾರತಮ್ಯದಿಂದ ಇರಬಾರದು.
ಇದರರ್ಥ ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಆಂತರಿಕ ಮೌಲ್ಯವನ್ನು ಗುರುತಿಸಬೇಕು. ಹೀಗಾಗಿ, ಜಾತಿವಾದದಿಂದ ಉಂಟಾಗುವ ಕಠಿಣ ಶ್ರೇಣಿಗಳು ಮತ್ತು ತಾರತಮ್ಯವು ಸಾಮಾಜಿಕ ಸಮಾನತೆಗೆ
ಅಡ್ಡಿಯಾಗುತ್ತದೆ.
ಪ್ರಶ್ನೆ.6 ಈ ಕೆಳಗಿನ ಪ್ರಶ್ನೆಗೆ ಉತ್ತರವನ್ನು ಬರೆಯಿರಿ.
ನ್ಯಾಯದ
ಭಾರತೀಯ ಪರಿಕಲ್ಪನೆಯನ್ನು ವಿವರಿಸಿ.
ಉತ್ತರ: ಭಾರತದಲ್ಲಿ ಜಾತಿ ವ್ಯವಸ್ಥೆ, ಪುರುಷಪ್ರಧಾನ
ವ್ಯವಸ್ಥೆ ಇತ್ಯಾದಿಗಳ ಮೂಲಕ ಸೃಷ್ಟಿಯಾದ
ವಿವಿಧ ರೀತಿಯ ಅಸಮಾನತೆಗಳಿವೆ. ಈ ವ್ಯವಸ್ಥೆಗಳಿಗೆ ಸಂಬಂಧಿಸಿದ ರಚನೆ ಮತ್ತು ಮೌಲ್ಯಗಳಲ್ಲಿ ಬದಲಾವಣೆಯೇ
ನ್ಯಾಯ ಎಂದು
ಡಾ. ಬಾಬಾಸಾಹೇಬ್ ಅಂಬೇಡ್ಕರ್ ವ್ಯಾಖ್ಯಾನಿಸುತ್ತಾರೆ.
ಅದರಂತೆ ಅವರು
ಸಮಾನತೆಯ
ನಿರ್ಮೂಲನೆಯೊಂದಿಗೆ ಸಾಧನಸಂಪತ್ತುಗಳ ವಿತರಣೆಯೊಂದಿಗೆ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು
ಜೋಡಿಸಿದ್ದಾರೆ. ಭಾರತದ
ಸಂವಿಧಾನದಲ್ಲಿ ಪ್ರಕ್ರಿಯಾತ್ಮಕ
ನ್ಯಾಯ ಮತ್ತು ಸಾಮಾಜಿಕ ನ್ಯಾಯ ಎಂಬ
ಎರಡು
ಮಾರ್ಗಗಳಿವೆ. ಹಿಂದುಳಿದ
ವರ್ಗಗಳ ಸಬಲಿಕರಣವನ್ನು ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ
ಸಾಧಿಸಬಹುದು.
ನ್ಯಾಯವನ್ನು
ಈ ಕೆಳಗಿನ ನೀತಿಗಳ ಮೂಲಕ ಕಾರ್ಯಗತಗೊಳಿಸಲಾಗುತ್ತದೆ:
·
ಮೀಸಲಾತಿ ನೀತಿ.
·
ಸಮಾಜದ ದುರ್ಬಲ ವರ್ಗಗಳಿಗೆ ವಿದ್ಯಾರ್ಥಿವೇತನಗಳು, ಅನುದಾನಗಳು, ಸಾಲಗಳು, ಆರೋಗ್ಯ ಸೇವೆಗಳು ಇತ್ಯಾದಿಗಳನ್ನು ನೀಡುವುದು.
·
ಹಿಂದುಳಿದ ವರ್ಗಗಳನ್ನು ಶೋಷಿಸುವ ಅನ್ಯಾಯಕಾರಕ
ಸಾಮಾಜಿಕ ಮತ್ತು ಆರ್ಥಿಕ ಪದ್ಧತಿಗಳ
ನಿರ್ಮೂಲನೆ.
ಉಪಕ್ರಮಗಳು:
ಮಹಿಳೆಯರು
ಸುರಕ್ಷಿತವಾಗಿ ಕೆಲಸಕ್ಕೆ ಹೋಗಲು ಕ್ರಮಗಳನ್ನು ಸೂಚಿಸಿ.
ವಿಭಾಗ
2 : ತುಲನಾತ್ಮಕ ಶಾಸನ ಹಾಗೂ
ರಾಜಕಾರಣ
ಶಾಸನದ ಮೂರು ಶಾಖೆಗಳು
|
ದೇಶಗಳು |
ಕಾಯದೆ ಮಂಡಳ ಕಾಯ್ದೆ ತಯಾರಿಸುತ್ತದೆ. |
ಕಾರ್ಯಕಾರಿ ಮಂಡಳ ಕಾಯ್ದೆಯ
ಪರಿಪಾಲನೆ ಮಾಡುತ್ತದೆ (ರಾಜಕೀಯ ಕಾರ್ಯಕಾರಿ ಹಾಗೂ ನೋಕರಶಾಹಿ) |
ಕಾಯ್ದೆಯ ಅರ್ಥ ನೀಡಿ ನ್ಯಾಯದಾನ ಮಾಡುತ್ತದೆ. |
|
ಭಾರತ |
ಸಂಸತ್ತು ಲೋಕಸಭೆ ರಾಜ್ಯಸಭೆ
|
ರಾಜಕೀಯ ಕಾರ್ಯಕಾರಿ ಮಂಡಳ ರಾಷ್ಟ್ರಪತಿ
(ರಾಜ್ಯದ ಪ್ರಮುಖ) ಪ್ರಧಾನಮಂತ್ರಿ
(ಶಾಸಕಾಂಗದ ಪ್ರಮುಖರು) ಹಾಗೂ ಮಂತ್ರಿಮಂಡಳ |
ಸರ್ವೋಚ್ಚ
ನ್ಯಾಯಾಲಯ ಉಚ್ಚ
ನ್ಯಾಯಾಲಯ ದುಯ್ಯಮ
ಹಾಗೂ ಇತರ ನ್ಯಾಯಾಲಯ |
|
ಯುನೈಡೆಟ್ ಕಿಂಗಡಮ್ |
ಸಂಸತ್ತು
ಹೌಸ್
ಆಫ್ ಕಾಮನ್ಸ್ ಹೌಸ್
ಆಫ್ ಲಾರ್ಡ್ಸ್ |
ರಾಜಕೀಯ ಕಾರ್ಯಕಾರಿ ಮಂಡಳ ರಾಜೇಶಾಹಿ
(ರಾಜ/ರಾಣಿಯರು) ರಾಜ್ಯದ
ಪ್ರಮುಖರು ನೋಕರಶಾಹಿ (ಪ್ರಶಾಸಕೀಯ ಯಂತ್ರಣೆ) |
ಸರ್ವೋಚ್ಚ
ನ್ಯಾಯಾಲಯ ಹಾಗೂ ಇತರ ನ್ಯಾಯಾಲಯ |
|
ಅಮೇರಿಕಾ (U.S.A.) |
ಕಾಂಗ್ರೆಸ್ ಹೌಸ್
ಆಫ್ ರಿಪ್ರೆಜೆಂಟಿವ್ಹ ಸಿನೆಟ್ |
ರಾಜಕೀಯ ಕಾರ್ಯಕಾರಿ ಮಂಡಳ ಅಧ್ಯಕ್ಷರು
(ರಾಜ್ಯ ಮತ್ತು ಶಾಸನದ ಪ್ರಮುಖ ಹಾಗೂ ಕಾರ್ಯದರ್ಶಿ) ನೋಕರಶಾಹಿ (ಪ್ರಶಾಸಕೀಯ
ಯಂತ್ರಣೆ ) |
ಸರ್ವೋಚ್ಚ
ನ್ಯಾಯಾಲಯ ರಾಜ್ಯಗಳ
ಸರ್ವೋಚ್ಚ ನ್ಯಾಯಾಲಯ ಹಾಗೂ ಇತರ ನ್ಯಾಯಾಲಯಗಳು |
4. ಸಂವಿಧಾನಿಕ ಶಾಸನ
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು
ಗುರುತಿಸಿ ವಿಧಾನಗಳನ್ನು ಪೂರ್ಣಗೊಳಿಸಿರಿ.
1. ಅಲಿಖಿತ
ಸಂವಿಧಾನವು ............. ದೇಶದಲ್ಲಿದೆ.
(ಯುನೈಟೆಡ್ ಕಿಂಗ್ಡಮ್, ಭಾರತ, ದಕ್ಷಿಣ ಆಫ್ರಿಕಾ, ಅಮೆರಿಕ)
2. ಸಂಸದೀಯ
ವ್ಯವಸ್ಥೆಯಲ್ಲಿ, ಶಾಸಕಾಂಗ
ಮತ್ತು ಕಾರ್ಯಾಂಗದಲ್ಲಿ ಅಧಿಕಾರವು ............ವಾಗಿದೆ.
(ವಿಭಾಜನ, ಸಮನ್ವಯ, ವಿಲೀನಿಕರಣ, ಕೇಂದ್ರೀಕರಣ)
3. ಅಮೇರಿಕನ್
ಸಂವಿಧಾನದ ಮೊದಲ ಹತ್ತು ತಿದ್ದುಪಡಿಗಳನ್ನು ಒಟ್ಟಾಗಿ ............ ಎಂದು ಕರೆಯಲಾಗುತ್ತದೆ.
(ಬಿಲ್ ಆಫ್ ರಾಯಿಟ್ಸ್, ಮ್ಯಾಗ್ನಾ ಕಾರ್ಟಾ, ಮೂಲಭೂತ ತತ್ವಗಳು, ಮೂಲಭೂತ
ಹಕ್ಕುಗಳು)
(ಬ) ತಪ್ಪು ಜೋಡಿಯನ್ನು ಸರಿಪಡಿಸಿ ಬರೆಯಿರಿ.
(i) ಮ್ಯಾಗ್ನಾ
ಕಾರ್ಟಾ - ಇಂಗ್ಲೆಂಡ್
(ii) ನಿರಾಕರಣೆಯ
ಹಕ್ಕು -
ಯುನೈಟೆಡ್ ಕಿಂಗ್ಡಮ್
(iii) ಕೇಶವಾನಂದ
ಭಾರತಿ ಪ್ರಕರಣ - ಮೂಲ ಸಂರಚನೆ
ಉತ್ತರ: (ii) ನಿರಾಕರಣೆಯ ಹಕ್ಕು -
ಯುನೈಟೆಡ್ ಕಿಂಗ್ಡಮ್
(ಕ) ಗುಂಪಿಗೆ ಸೇರದ ಪದವನ್ನು ಗುರುತಿಸಿ.
1. ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಐರ್ಲೆಂಡ್ ಪ್ರಜಾಪ್ರಭುತ್ವ
ಉತ್ತರ:
ಐರ್ಲೆಂಡ್
ಪ್ರಜಾಪ್ರಭುತ್ವ(ಐರ್ಲ್ಯಂಡ
ಇಂಗ್ಲೆಂಡದ
ಭಾಗವಿಲ್ಲ)
3. ಭಾರತ, ಆಸ್ಟ್ರೇಲಿಯಾ, ಕೆನಡಾ, ಅರ್ಜೆಂಟೀನಾ
ಉತ್ತರ: ಅರ್ಜೆಂಟೀನಾ
(ಸಂಸದೀಯ ಸರಕಾರ ಪದ್ಧತಿ ಇಲ್ಲ)
ಪ್ರಶ್ನೆ.3 ಕೆಳಗಿನ ವಿಧಾನಗಳನ್ನು ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
1. ಭಾರತೀಯ
ಒಕ್ಕೂಟವನ್ನು ಫೆಡರಲ್ ಒಕ್ಕೂಟ ಎಂದು ಕರೆಯಲಾಗುತ್ತದೆ.
ಉತ್ತರ: ಈ ವಿಧಾನ ಸರಿಯಾಗಿದೆ. ಭಾರತೀಯ ಸಂವಿಧಾನವು
ದ್ವಿಮುಖ ಸರ್ಕಾರಗಳನ್ನು ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒದಗಿಸುತ್ತದೆ. ಕೇಂದ್ರ
ಪಟ್ಟಿ,
ರಾಜ್ಯ ಪಟ್ಟಿ ಮತ್ತು ಸಮಕಾಲೀನ ಪಟ್ಟಿ ಎಂಬ ಮೂರು ಪಟ್ಟಿಗಳ ಆಧಾರದ ಮೇಲೆ
ಅಧಿಕಾರಗಳ ವಿತರಣೆ ಇದೆ. ಆದಾಗ್ಯೂ, ಭಾರತವು ಪ್ರಬಲ ಕೇಂದ್ರ
ಸರ್ಕಾರದೊಂದಿಗೆ ಫೆಡರಲ್ ರಚನೆಯನ್ನು ಹೊಂದಿದೆ. ದೇಶದ ಸಮತೋಲಿತ ಅಭಿವೃದ್ಧಿಯನ್ನು
ಖಚಿತಪಡಿಸಿಕೊಳ್ಳಲು ಬಲವಾದ ಕೇಂದ್ರ ಸರ್ಕಾರ ಅಗತ್ಯವಿದೆ ಎಂದು ಸಂವಿಧಾನ ರಚನಾಕಾರರು
ಭಾವಿಸಿದರು.
2. ಅಮೆರಿಕದಲ್ಲಿ
ಸಂಸದೀಯ ವ್ಯವಸ್ಥೆ ಅಸ್ತಿತ್ವದಲ್ಲಿದೆ.
ಉತ್ತರ: ತಪ್ಪು, ಸಂಸದೀಯ
ವ್ಯವಸ್ಥೆಯಲ್ಲಿ, ಶಾಸಕಾಂಗ ಮತ್ತು ಕಾರ್ಯಾಂಗ ಎಂಬ ಎರಡು ವ್ಯವಸ್ಥೆಗಳ ವಿಲೀನಿಕರಣ
ಇರುತ್ತದೆ. ಇದು ಭಾರತ, ಯುನೈಟೆಡ್ ಕಿಂಗ್ಡಮ್, ಈ ದೇಶಗಳಲ್ಲಿ ಸಂಸದೀಯ ವ್ಯವಸ್ಥೆ ಇರುತ್ತದೆ. ಏಎಮ್,ಅಮೇರಿಕಾ
ಅಂದರೆ ಯುನೈಟೆಡ್ ಸ್ಟೇಟ್ಸ್ ಸರ್ಕಾರಿ ಅಧಿಕಾರಗಳ ಪ್ರತ್ಯೇಕತೆಯ ಆಧಾರದ ಮೇಲೆ ಅಧ್ಯಕ್ಷೀಯ
ವ್ಯವಸ್ಥೆಯನ್ನು ಅನುಸರಿಸುತ್ತದೆ. ಇಲ್ಲಿ, ಕೇವಲ ಒಬ್ಬ ಕಾರ್ಯಾಂಗ
ಅಂದರೆ, ನಾಗರಿಕರಿಂದ ನೇರವಾಗಿ ಆಯ್ಕೆಯಾಗುವ ಅಧ್ಯಕ್ಷರಿದ್ದಾರೆ.
ಪ್ರಶ್ನೆ.3 ಸಂಬಂಧವನ್ನು ಸ್ಪಷ್ಟೀಕರಿಸಿರಿ.
1. ಸಂಸದೀಯ
ಸರ್ಕಾರ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ.
ಉತ್ತರ: ಸಂಸದೀಯ ಸರಕಾರ ವ್ಯವಸ್ಥೆಯಲ್ಲಿ ರಾಷ್ಟ್ರ
ಪ್ರಮುಖರು ಹಾಗೂ ಶಾಸಕಾಂಗ ಪ್ರಮುಖರು ಬೇರೆ ಬೇರೆ ಇರುತ್ತಾರೆ. ರಾಷ್ಟ್ರಪತಿ ಅಥವಾ U.K.
ದಲ್ಲಿಯ ಅರಸರು ರಾಷ್ಟ್ರ ಪ್ರಮುಖ ಇರುತ್ತಾರೆ. ಪ್ರಧಾನ ಮಂತ್ರಿಗಳು ಶಾಸಕಾಂಗ
ಪ್ರಮುಖರಿರುತ್ತಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಅರಸರು
ಕೂಡಿಕೊಂಡು ಕಾರ್ಯಕಾರಿ ಮಂಡಲ ತಯಾರಾಗುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಸತ್ತೆಯು
ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಳಿಯ ಕಡೆಗೆ ಇರುತ್ತದೆ.
ಸಂಸದೀಯ
ಸರಕಾರ ಪದ್ಧತಿಯಲ್ಲಿ ಇಬ್ಬರು ಕಾರ್ಯಾಂಗ ಪ್ರಮುಖ ಇರುತ್ತಾರೆ. ಒಬ್ಬರು ನಾಮಮಾತ್ರ ಪ್ರಮುಖರು
ಹಾಗೂ ಒಬ್ಬರು ನಿಜವಾದ ಪ್ರಮುಖರು. ದೇಶದ ಆಡಳಿತ ನಾಮಮಾತ್ರ ಪ್ರಮುಖರ ಹೆಸರು ಮತ್ತು ಆಜ್ಞೆಯಂತೆ
ನಡೆಯುತ್ತಿದ್ದರೂ ಪ್ರತ್ಯಕ್ಷ ನಿರ್ಣಯಗಳನ್ನು ಮಂತ್ರಿಮಂಡಳದಲ್ಲಿ ನಿಜವಾದ ಪ್ರಮುಖರು
ತೆಗೆದುಕೊಳ್ಳುತ್ತಾರೆ. ನಾಮಮಾತ್ರ ಪ್ರಮುಖರು ವಂಶಪರಂಪರೆಯಿಂದ ಆಯ್ಕೆ ಮಾಡಿದರೆ ಅದಕ್ಕೆ
ಸಾಂವಿಧಾನಿಕ ರಾಜೆಶಾಹಿ ಎನ್ನುತ್ತಾರೆ. ಯಾವ ನಾಮಮಾತ್ರ ಪ್ರಮುಖರನ್ನು ಆಯ್ಕೆ ಮಾಡಲಾಗುತ್ತದೆಯೋ
ಆ ಪ್ರಕಾರಕ್ಕೆ ಪ್ರಜಾಪ್ರಭುತ್ವ ಎನ್ನುತ್ತಾರೆ. ಭಾರತದಲ್ಲಿ ರಾಷ್ಟ್ರಪತಿ ನಾಮಮಾತ್ರ
ಪ್ರಮುಖರಿದ್ದು ಪ್ರಧಾನಮಂತ್ರಿ ಮಂತ್ರಿಮಂಡಳದ ಪ್ರಮುಖರಿರುತ್ತಾರೆ. ಸಂಸತ್ತಿನಲ್ಲಿ ಬಹುಮತವಿದ್ದ
ವ್ಯಕ್ತಿಗೆ ಪ್ರಧಾನಿಯಾಗಿ ರಾಷ್ಟ್ರಪತಿಗಳು ಆಯ್ಕೆ ಮಾಡುತ್ತಾರೆ. ಮಂತ್ರಿಗಳ ಸಹಾಯದಿಂದ
ಪ್ರಧಾನಮಂತ್ರಿಗಳು ದೆಃಸದ ಆಡಳಿತ ನಡೆಸುತ್ತಾರೆ.
2. ಅಧ್ಯಕ್ಷೀಯ
ವ್ಯವಸ್ಥೆಯಲ್ಲಿ ಅಧ್ಯಕ್ಷ ಮತ್ತು ಶಾಸಕಾಂಗ.
ಉತ್ತರ: ಮರ್ಯಾದಿತ ಕಾಲಾವಧಿಗಾಗಿ ಜನರಿಂದ ಆಯ್ಕೆಯಾದ
ಕಾರ್ಯಾಂಗ ಪ್ರಮುಖರಿಗೆ ಅಧ್ಯಕ್ಷ ಎನ್ನುತ್ತಾರೆ. ಅಧ್ಯಕ್ಷರು ರಾಷ್ಟ್ರ ಮ್ರಮುಖ ಹಾಗೂ ಶಾಸಕಾಂಗ
ಪ್ರಮುಖ ಇವೆರಡೂ ಪಾತ್ರ ವಹಿಸುತ್ತಾರೆ. ಇಂತಹ ಶಾಸನ ವ್ಯವಸ್ಥೆಗೆ ಅಧ್ಯಕ್ಷೀಯ ಸಂಸದ ಪದ್ಧತಿ
ಎನ್ನುವರು. ಅಮೇರಿಕಾ ಅಧ್ಯಕ್ಷೀಯ ಸಂಸದ ವ್ಯವಸ್ಥೆ ಹೊಂದಿರುವ ದೇಶವಾಗಿದೆ. ಅಧ್ಯಕ್ಷರಿಗೆ
ಸಂವಿಧಾನ ನೀಡಿದ ಹಕ್ಕುಗಳಂತೆ ಕಾಯದೆ ಮಂಡಳಿಯು ನಿರ್ಮಿಸಿದ ಕಾಯದೆಯಂತೆ ಶಾಸನ ನಡೆಸುವುದು, ತನ್ನ ಇಚ್ಚೆಯಂತೆ ಮಂತ್ರಿ ಅಥವಾ ಅಧಿಕಾರಿಗಳ ಆಯ್ಕೆ ಮಾಡುವುದು ಅಧ್ಯಕ್ಷರ ಕಾರ್ಯ
ಇರುತ್ತದೆ. ಕಾಯದೆ ಮಂಡಲ ಜನರಿಂದ ಆಯ್ಕೆ ಆಗಿರುತ್ತದೆ. ಸಂವಿಧಾನವು ಕಾಯದೆ ನಿರ್ಮಿತಿಯ ಅಧಿಕಾರ
ಕೊಟ್ಟಿದ್ದರೂ ಅದು ಮರ್ಯಾದಿತ ಸ್ವರೂಪದ್ದು ಆಗಿದೆ. ಏಕೆಂದರೆ ಅಧ್ಯಕ್ಷರ ಮಂಜುರಿಯ ನಂತರವೇ
ಕಾಯದೆ ಮಂಡಲಕ್ಕೆ ಕಾಯದೆ ಮಾಡಲು ಬರುತ್ತದೆ. ಆ ಕಾಯದೆಯನ್ನು ನಿರಾಕರಿಸುವ ಹಕ್ಕು ಅಧ್ಯಕ್ಷರಿಗೆ
ಇರುತ್ತದೆ. ಅದಕ್ಕೆ ನಿರಾಕರಣೆಯ ಹಕ್ಕು(Veto Power) ಎನ್ನುತ್ತಾರೆ.
ಒಂದು ವೇಳೆ ಅಧ್ಯಕ್ಷರು ಸಂವಿಧಾನದ ಉಲ್ಲಂಘನೆ ಮಾಡಿದರೆ ಕಾಯದೆ ಮಂಡಲ ಅವರಿಗೆ ಪದಚ್ಯುತ
ಮಾಡಬಹುದು. ಆದರೆ ಸತ್ತೆಯಲ್ಲಿ ಉಳಿಯಲು ಅಧ್ಯಕ್ಷರಿಗೆ ಬಹುಮತದ ಅಗತ್ಯ ಇರುವುದಿಲ್ಲ.
ಪ್ರಶ್ನೆ.4. ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು
ಬರೆಯಿರಿ.
1. ಸಾಂವಿಧಾನಿಕತೆ
ಮತ್ತು ಸಾಂವಿಧಾನಿಕ ನೈತಿಕತೆಯ ಎರಡು ಪರಿಕಲ್ಪನೆಗಳನ್ನು ವಿವರಿಸಿ.
ಉತ್ತರ: ಪ್ರಜಾಪ್ರಭುತ್ವದಲ್ಲಿ ಸಂವಿಧಾನವಾದ ಅಥವಾ
ಸಾಂವಿಧಾನಿಕತೆ ಎಂದರೆ ಕೇವಲ ಶಾಸನದ ಅಧಿಕಾರಗಳ ಮೇಲೆ ನಿಯಂತ್ರಣೆ ಇಡುವುದಷ್ಟೇ ಇಲ್ಲ, ಸಂವಿಧಾನದ ಭಾವನೆಗಳ ಪಾಲನೆ ಮಾಡುವುದು ಎಂದರೆ ಸಂವಿಧಾನಿಕತೆ. ಸಂವಿಧಾನದ ಮೂಲಭೂತ
ತತ್ವಗಳ ಮೇಲೆ ಸತ್ತೆಯಲ್ಲಿ ಬರುವವರು ಆ ಸಂವಿಧಾನದ ಭಾವನೆಗಳನ್ನೂ ಪಾಲಿಸಬೇಕಾಗುತ್ತದೆ. ಇದಕ್ಕೆ
ಸಾಂವಿಧಾನಿಕ ನೈತಿಕತೆ ಎಂದು ಕರೆಯುತ್ತಾರೆ. ಸಾಂವಿಧಾನಿಕ ನೈತಿಕತೆಯು ನೈಸರ್ಗಿಕ
ಭಾವನೆಯಾಗಿರುವುದಿಲ್ಲ ಅದನ್ನು ಹೊಂದಬೇಕಾಗುತ್ತದೆ. ನಮ್ಮ ಜನತೆಯಲ್ಲಿ ಅದನ್ನು ಅಳವಡಿಸಿ
ಕಲಿಸಬೇಕಾಗುತ್ತದೆ ಎಂದು ಡಾ. ಬಾಬಾಸಾಹೇಬ ಅಂಬೇಡಕರ ಘಟನಾ ಸಮಿತಿಯ ತಮ್ಮ ಭಾಷಣದಲ್ಲಿ
ಹೇಳಿದರು.
2. ಭಾರತೀಯ
ಒಕ್ಕೂಟದ ಸ್ವರೂಪವನ್ನು ವಿವರಿಸಿ.
ಉತ್ತರ: ಭಾರತೀಯ ಒಕ್ಕೂಟದ ಸ್ವರೂಪವು ವಿಶಿಷ್ಟವಾಗಿದೆ, ಏಕೆಂದರೆ ಇದು ಒಕ್ಕೂಟ ಮತ್ತು ಏಕಾಂಗಿತ್ವದ ಲಕ್ಷಣಗಳನ್ನು ಹೊಂದಿದೆ. ಭಾರತೀಯ
ರಾಜ್ಯಾಡಳಿತವು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಎಂಬ ಶಾಸನ ವ್ಯವಸ್ಥೆ ಹೊಂದಿರುತ್ತದೆ. ಹೀಗೆ ದ್ವಿತೀಯ ಸರ್ಕಾರ ವ್ಯವಸ್ಥೆ ಹೊಂದಿದೆ. ಕೇಂದ್ರ
ಸರ್ಕಾರ ರಾಷ್ಟ್ರದ ಮಟ್ಟದ ವಿಷಯಗಳನ್ನು ನಿರ್ವಹಿಸುತ್ತದೆ, ಮತ್ತು
ರಾಜ್ಯ ಸರ್ಕಾರಗಳು ಸ್ಥಳೀಯ ಮತ್ತು ಪ್ರಾದೇಶಿಕ ವಿಷಯಗಳನ್ನು ನಿರ್ವಹಿಸುತ್ತವೆ .
ಶಾಸನಾಧಿಕಾರದ ವಿಭಜನೆ
ಸಂವಿಧಾನದ ಏಳನೇ ಅನುಸೂಚಿಯಲ್ಲಿ ವಿಷಯಗಳನ್ನು ಮೂರು
ಪಟ್ಟಿಗಳಾಗಿ ವಿಭಜಿಸಲಾಗಿದೆ:
* ಕೇಂದ್ರ ಪಟ್ಟಿ (Union
List): ರಕ್ಷಣಾ, ವಿದೇಶಾಂಗ,
ಕರೆನ್ಸಿ ಮುಂತಾದ ವಿಷಯಗಳು.
* ರಾಜ್ಯ ಪಟ್ಟಿ (State
List): ಪೊಲೀಸ್, ಕೃಷಿ,
ಆರೋಗ್ಯ ಮುಂತಾದ ವಿಷಯಗಳು.
* ಸಂಯುಕ್ತ ಪಟ್ಟಿ (Concurrent
List): ಶಿಕ್ಷಣ, ಅರಣ್ಯ,
ಪೌರಸತ್ತೆ ಮುಂತಾದ ವಿಷಯಗಳು. ಈ ಪಟ್ಟಿಯ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ
ಎರಡೂ ಶಾಸನ ಮಾಡಬಹುದು, ಆದರೆ ಸಂಘರ್ಷದ ಸಂದರ್ಭದಲ್ಲಿ ಕೇಂದ್ರದ
ಕಾಯಿದೆ ಮೇಲುಗೈ ಹೊಂದಿದೆ .
ಭಾರತೀಯ ಸಂವಿಧಾನವು ರಾಷ್ಟ್ರದ ಪರಮಾಧಿಕಾರವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆಲ್ಲಾ ಸಂವಿಧಾನದ ನಿಯಮಗಳಿಗೆ ಬದ್ಧರಾಗಿರಬೇಕು. ಸಂವಿಧಾನದ
ಉಲ್ಲಂಘನೆಯಾದರೆ, ನ್ಯಾಯಾಂಗವು ಆ ಕಾಯಿದೆಗಳನ್ನು
ಅಮಾನ್ಯಗೊಳಿಸಬಹುದು .
ರಾಜ್ಯಗಳು ತಮ್ಮ ಆದಾಯವನ್ನು ಸಂಗ್ರಹಿಸಬಹುದು, ಆದರೆ ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಅನುದಾನಗಳನ್ನು
ನೀಡುತ್ತದೆ. ಇದರ ಮೂಲಕ ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಆರ್ಥಿಕ ನಿಯಂತ್ರಣ ಹೊಂದಿದೆ .
ಪ್ರಶ್ನೆ.5 ಕೊಟ್ಟ ಸಂಗತಿಗಳ ಆಧಾರದ ಮೇಲೆ ಈ ಕೆಳಗಿನ ಪ್ರಶ್ನೆಗಳಿಗೆ
ವಿವರವಾದ ಉತ್ತರಗಳನ್ನು ಬರೆಯಿರಿ.
ಸಂವಿಧಾನ ಮತ್ತು ಸಂವಿಧಾನದ ಪರಸ್ಪರ ಸಂಬಂಧಿತ ಘಟಕಗಳನ್ನು
ವಿವರಿಸಿ.
(ಅ)
ಸಂವಿಧಾನ ಎಂದರೇನು?
(ಬ)
ನಿಯಮಗಳ ಸಂಚು
(ಕ)
ಹಕ್ಕುಗಳ ಸಂಚು
(ಡ)
ಗುರಿಗಳು ಮತ್ತು ಮೌಲ್ಯಗಳ ಸಂಚು
ಉತ್ತರ: (ಅ)
ಸಂವಿಧಾನ ಎಂದರೇನು?
ಸಂವಿಧಾನವು ಒಂದು ಜೀವಂತವಿರುವ ಕಾಗದಪತ್ರಗಳ
ಸಂಗ್ರಹವಾಗಿದೆ. ದೇಶದ ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿರುತ್ತದೆ. ಸಂವಿಧಾನದಲ್ಲಿ
ಮೂರು ಮಹತ್ವದ ಪರಸ್ಪರ ಸಂಬಂಧಿಸಿದ ಘಟಕಗಳು ಇರುತ್ತವೆ.
(ಬ) ನಿಯಮಗಳ ಸಂಚು: ಸಂವಿಧಾನದಲ್ಲಿ
ಕಾಯದೆಮಂಡಳ, ಕಾರ್ಯಕಾರಿ ಮಂಡಳ,
ನ್ಯಾಯಮಂಡಳ ಈ ಮೂರು ಶಾಸನದ ವಿಭಾಗಗಳ ಸಂರಚನೆ, ಅವುಗಳ ಅಧಿಕಾರಗಳು, ಕಾರ್ಯಗಳು ಹಾಗೂ ಅವುಗಳ ಕರ್ತವ್ಯಗಳ ಬಗೆಗಿನ ನಿಯಮಗಳು ಇರುತ್ತವೆ. ಪ್ರತಿಯೊಂದು
ಶಾಸನದ ವಿಭಾಗವು ಅದಕ್ಕೆ ಒಪ್ಪಿಸಿರುವ ಅಧಿಕಾರದ ಕಕ್ಷೆಯೊಳಗೆ ಕಾರ್ಯ ಮಾಡುತ್ತದೆ. ಇದ್ದಕ್ಕೆ
ಉಳಿದ ಎರಡು ಶಾಸನದ ವಿಭಾಗಗಳು ನಿಯಂತ್ರಣೆಯನ್ನು ಇಡುವ ಕಾರ್ಯ ಮಾಡುತ್ತವೆ. ಯಾವುದೇ ಶಾಸಕಾಂಗದ
ಪ್ರಮುಖನು ತನ್ನ ಅಧಿಕಾರಗಳ ದುರ್ಬಳಕೆ ಅಥವಾ ಸಂವಿಧಾನದ ಉಲ್ಲಂಘನೆ ಮಾಡಿದರೆ ಅವರನ್ನು ಪದಚ್ಯುತ
ಮಾಡುವ ಅಧಿಕಾರ ಸಂವಿಧಾನಕ್ಕೆ ಇರುತ್ತದೆ.
(ಕ) ಹಕ್ಕುಗಳ
ಸಂಚು: ಸಂವಿಧಾನದಲ್ಲಿ
ನಾಗರೀಕರ ಹಕ್ಕುಗಳ ಮತ್ತು ಕರ್ತವ್ಯಗಳ ಉಲ್ಲೇಖ ಮಾಡಲಾಗಿದೆ. ಅದರಂತೆ ಸಂವಿಧಾನವು ನಮ್ಮ ಈ
ಹಕ್ಕುಗಳ ಸಂರಕ್ಷಣೆ ಮಾಡುತ್ತದೆ. ಪ್ರತಿಯೊಬ್ಬ ನಾಗರಿಕನಿಗೆ ಸ್ವತಂತ್ರವಾಗಿ, ಸನ್ಮಾನದಿಂದ ಹಾಗೂ ಪ್ರತಿಷ್ಠೆಯಿಂದ ಬದುಕಲು ಬರಬೇಕೆಂದು ವಿವಿಧ ಹಕ್ಕುಗಳು ನೀಡಿದೆ.
ಆದರೆ ಈ ಹಕ್ಕುಗಳಿಗೆ ಕೆಲವು ಮರ್ಯಾದೆಗಳಿವೆ. ಭಾರತೀಯ ಸಂವಿಧಾನದಲ್ಲಿ ಜನತೆಯ ಹಕ್ಕುಗಳ
ಸಂರಕ್ಷಣೆ ಮಾಡಲು ವಿವಿಧ ಉಪಾಯಗಳನ್ನು ಮಾಡಲಾಗಿದೆ. ಈ ಜವಾಬ್ದಾರಿಯನ್ನು ನ್ಯಾಯಮಂಡಳಕ್ಕೆ
ಕೊಟ್ಟಿದೆ. ಈ ರೀತಿಯಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಘಟಕದಿಂದಾಗಿ ಶಾಸನ, ಸಮಾಜ
ಹಾಗೂ ವ್ಯಕ್ತಿ ಇವುಗಳ ಪರಸ್ಪರಸಂಬಂಧವನ್ನ್ಉ ನಿಶ್ಚಿತ ಮಾಡುವ ಒಂದು ಚೌಕಟ್ಟು ತಯಾರಾಗುತ್ತದೆ.
(ಡ) ಉದ್ದೇಶಗಳು
ಮತ್ತು ಮೌಲ್ಯಗಳ ಸಂಚು:
ಸಂವಿಧಾನದಲ್ಲಿ ಉದ್ದೇಶಗಳು ಮತ್ತು ಮೌಲ್ಯಗಳನ್ನು ನಮೂದಿಸಲಾಗಿರುತ್ತದೆ. ಇದರಿಂದ ಸಂವಿಧಾನ
ನಿರ್ಮಿತಿಯ ಉದ್ದೇಶ ಸ್ಪಷ್ಟವಾಗುತ್ತದೆ. ಉದಾ. ಜಗತ್ತಿನಲ್ಲಿ ಎಲ್ಲಕ್ಕಿಂತ ಹಳೆಯ
ಸಂವಿಧಾನಗಳಲ್ಲಿ ಒಂದಾದ ಅಮೇರಿಕೆಯ ಸಂವಿಧಾನವು ಅದರ ನಿರ್ಮಿತಿಯ ಹಿಂದಿರುವ ಉದ್ದೇಶವನ್ನು
ಸ್ಪಷ್ಟಮಾಡಿದೆ. ಅದು ‘ನ್ಯಾಯ ಪ್ರಸ್ತಾಪಿತ ಮಾಡುವುದು, ದೇಶಾಂತರ್ಗತ ಶಾಂತತೆ ಹಾಗೂ ಸಂರಕ್ಷಣೆ ನೀಡುವುದು, ಸಾರ್ವತ್ರಿಕ
ಜನಕಲ್ಯಾಣ ಸಾಧಿಸುವುದು, ನಮಗೆ ಮತ್ತು ನಮ್ಮ ವಂಶಿಕರಿಗೆ ಸ್ವತಂತ್ರದ
ವರದಾನ ದೊರಕಿಸುವುದು’ ಇವುಗಳಿಗಾಗಿ ಈ ಸಂವಿಧಾನ ಅಸ್ಥಿತ್ವದಲ್ಲಿ
ಬಂದಿದೆ. ಇಂತಹದ್ದೇ ಉದ್ದೇಶಗಳ ಸಲುವಾಗಿ ಭಾರತೀಯ ಸಂವಿಧಾನದ ರಚನೆಯಾಗಿದೆ. ಭಾರತೀಯ ಸಂವಿಧಾನವು
ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಮೌಲ್ಯಗಳನ್ನು
ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಉಪಕ್ರಮ: ಅಮೆರಿಕನ್
ಸಂವಿಧಾನದ ಹಕ್ಕುಗಳ ಮಸೂದೆಯಲ್ಲಿ ಯಾವ ಹಕ್ಕುಗಳನ್ನು ಪಟ್ಟಿ ಮಾಡಲಾಗಿದೆ?
5. ಪ್ರತಿನಿಧಿತ್ವದ
ಸಂಕಲ್ಪನೆ
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು
ಗುರುತಿಸಿ ವಿಧಾನಗಳನ್ನು ಪೂರ್ಣಗೊಳಿಸಿರಿ.
1. ಪ್ರಾಚೀನ ಗ್ರೀಸದಲ್ಲಿ
.........
ಇತ್ತು.
(ಹುಕುಮಶಾಹಿ, ಪ್ರತ್ಯಕ್ಷ ಪ್ರಜಾಪ್ರಭುತ್ವ, ಅಪ್ರತ್ಯಕ್ಷ
ಪ್ರಜಾಪ್ರಭುತ್ವ, ರಾಜಪ್ರಭುತ್ವ)
2. ವಿಶ್ವದ
ಅತ್ಯಂತ ಹಳೆಯ ಪ್ರತಿನಿಧಿಕ ಸಭೆಯು .........
ಆಗಿದೆ.
(ಹೌಸ್ ಆಫ್ ಕಾಮನ್ಸ್, ಹೌಸ್ ಆಫ್ ಲಾರ್ಡ್ಸ್, ಸಿನೆಟ್, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್)
(ಬ) ನೀಡಿರುವ ಹೇಳಿಕೆಗಳಿಗೆ ಸೂಕ್ತವಾದ ಸಂಕಲ್ಪನೆಯನ್ನು ಬರೆಯಿರಿ.
ಜನರು ಸರ್ಕಾರವನ್ನು ನಡೆಸಲು ಕೆಲವು ಜನರನ್ನು ಆಯ್ಕೆ ಮಾಡುವ
ವಿಧಾನವೆಂದರೆ..... ಪ್ರತಿನಿಧಿ ಪ್ರಜಾಪ್ರಭುತ್ವ
(ಕ) ಗುಂಪಿಗೆ ಸೇರದ ಪದವನ್ನು ಗುರುತಿಸಿ.
ಭಾರತೀಯ ರಾಷ್ಟ್ರೀಯ ಕಾರ್ಮಿಕರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಉತ್ತರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ಇದು
ರಾಜಕೀಯ ಪಕ್ಷವಾಗಿದೆ.
ಪ್ರಶ್ನೆ 2 ಈ ಕೆಳಗಿನ ಸಂಕಲ್ಪನೆ ಚಿತ್ರವನ್ನು ಪೂರ್ಣಗೊಳಿಸಿರಿ.
ಭಾರತದಲ್ಲಿಯ ರಾಷ್ಟ್ರೀಯ ಪಕ್ಷಗಳು:
1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ
2)
3) ಭಾರತೀಯ ಜನತಾ ಪಕ್ಷ
4) ಭಾರತೀಯ ಕಮ್ಯೂನಿಷ್ಟ ಪಕ್ಷ(ಮಾರ್ಕ್ಸ್ ವಾದಿ)
5) ಬಹುಜನ ಸಮಾಜ ಪಕ್ಷ
6) ರಾಷ್ಟ್ರವಾದಿ ಕಾಂಗ್ರೆಸ್
7) ತೃಣಮೂಲ ಕಾಂಗ್ರೆಸ್
8) ಆಮ ಆದಮಿ ಪಾರ್ಟಿ
ಪ್ರಶ್ನೆ.3 ಸಂಸಹಬಂಧವನ್ನು ವಿವರಿಸಿ.
ಸರ್ಕಾರಿ ಮತ್ತು ಸರ್ಕಾರೇತರ ಸಂಘಟನೆಗಳು
ಉತ್ತರ: ಸರ್ಕಾರಿ ಸಂಸ್ಥೆಗಳು ಔಪಚಾರಿಕ ರಚನೆಯನ್ನು
ಹೊಂದಿರುವ ಸಾರ್ವಜನಿಕ ಸಂಸ್ಥೆಗಳಾಗಿವೆ. ಸರ್ಕಾರಿ ಸಂಘಟನೆಗಳು ಜನಕಲ್ಯಾಣಕಾರಿ ಹಾಗೂ ವಿಕಸಾತ್ಮಕ
ಉಪಕ್ರಮಗಳನ್ನು ನಿರ್ವಹಿಸುತ್ತವೆ.
ಇತ್ತಿತ್ತಲಾಗಿ ಸರಕಾರಿ ಸಂಸ್ಥೆಗಳಿಗಿಂತ ಸರ್ಕಾರೇತರ
ಸಂಘಟನೆಗಳು ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿವೆ. ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು
ಲಾಭರಹಿತ ಗುಂಪುಗಳಾಗಿ ಸಾಮಾಜಿಕ ಕಾರ್ಯ ಮಾಡುವ ಎನ್ಜಿಓಗಳು ಸಮಾಜದಲ್ಲಿ ನಿರ್ಮಾಣವಾಗಿವೆ.
ವೃದ್ಧರೂ/ಮಹಿಳೆಯರು/ಮಕ್ಕಳು/ಅಂಗವಿಕಲರ ಕಲ್ಯಾಣ ಇತ್ಯಾದಿ ಕ್ಷೇತ್ರದಲ್ಲಿ NGO ಗಳ ಕೆಲಸ, ಉದಾಹರಣೆಗೆ, ಗ್ರೀನ್
ಪೀಸ್ (ಪರಿಸರ), ಹೆಲ್ಪ್ ಏಜ್ (ಹಿರಿಯ ನಾಗರಿಕರು), CRY (ಮಕ್ಕಳು), AGNI (ರಾಜಕೀಯ ಜಾಗೃತಿ), PFA (ಪ್ರಾಣಿಗಳು).
ಪ್ರ.4 ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.
ಒತ್ತಡ ಗುಂಪುಗಳು ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿವೆ.
ಉತ್ತರ: ಒತ್ತಡ ಗುಂಪುಗಳು ಜನರ ಪ್ರತಿನಿಧಿತ್ವ ಮಾಡುವ
ಅನೌಪಚಾರಿಕ ಮಧ್ಯಮಗಳಾಗಿವೆ. ಶಾಸನದ ಧೋರಣೆಗಳನ್ನು ಕಾರ್ಯರೂಪಕ್ಕೆ ತರಲು ಸತ್ತಾಧಾರಿ ಸರಕಾರದ ಮೇಲೆ
ಒತ್ತಡ ತರುವ ಕಾರ್ಯ ಈ ಒತ್ತಡ ಗುಂಪುಗಳು ಮಾಡುತ್ತವೆ. ಸರಕಾರದಲ್ಲಿ ಅಥವಾ ವಿರೋಧಿ ಪಕ್ಷದಲ್ಲಿ ಈ
ಗುಂಪುಗಳು ಬರುವುದಿಲ್ಲ. ಕಾರ್ಮಿಕರ ಸಂಘಟನೆ, ವಿದ್ಯಾರ್ಥಿ
ಸಂಘಟನೆ, ವಿವಿಧ NGO ಗಳು ಶಾಸನದ ಮೇಲೆ
ಹೊರಗಿನಿಂದ ಪ್ರಭಾವ ಬೀರುತ್ತ ಜನಸಾಮಾನ್ಯರ ಕೆಲಸ ಮಾಡಿಕೊಳ್ಳುತ್ತವೆ. ಅವು ಎಂದಿಗೂ ಚುನಾವಣೆಗೆ
ನಿಲ್ಲುವುದಿಲ್ಲ. ಏಕೆಂದರೆ ಈ ಗುಂಪುಗಳ ಸ್ವರೂಪ ಸೀಮಿತವಾಗಿದ್ದು ರಾಜಕೀಯ ಪಕ್ಷಗಳ ವಿಸ್ತಾರ ಹೆಚ್ಚಿರುತ್ತದೆ.
ಆದ್ದರಿಂದ ಈ ಗುಂಪುಗಳು ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿವೆ.
ಪ್ರಶ್ನೆ.5 ಕೊಟ್ಟ ಸಂಗತಿಗಳ ಆಧಾರದ ಮೇಲೆ ಈ ಕೆಳಗಿನ ಪ್ರಶ್ನೆಗಳಿಗೆ
ವಿವರವಾದ ಉತ್ತರಗಳನ್ನು ಬರೆಯಿರಿ.
ಪ್ರತಿನಿಧಿತ್ವದ ಅರ್ಥವನ್ನು
ವಿವರಿಸಿ ಮತ್ತು ಪ್ರತಿನಿಧಿತ್ವದ ಪದ್ಧತಿಗಳನ್ನು ಸ್ಪಷ್ಟಮಾಡಿರಿ.
(ಅ) ಪ್ರತಿನಿಧಿತ್ವದ
ಅರ್ಥ (ಬ) ಚುನಾವಣೆ (ಕ) ನೇಮಕಾತಿ (ಡ) ಸರ್ಕಾರೇತರ
ಉತ್ತರ: (ಅ) ಪ್ರತಿನಿಧಿತ್ವದ
ಅರ್ಥ: ಯಾವುದೇ ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧಿಯ ಸಂಕಲ್ಪನೆ
ಮುಖ್ಯವಾಗಿದೆ. ಇಂದು, ಹೆಚ್ಚಿನ ದೇಶಗಳು ವಿಸ್ತಾರಿತ ಪ್ರದೇಶಗಳು
ಮತ್ತು ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಆದ್ದರಿಂದ, ಪ್ರತ್ಯಕ್ಷ
ಪ್ರಜಾಪ್ರಭುತ್ವ ಎಲ್ಲೆಡೆ ಸಾಧ್ಯವಿಲ್ಲ. ಹಾಗಾಗಿ ಅಪ್ರತ್ಯಕ್ಷ ಪ್ರಜಾಪ್ರಭುತ್ವದ ರೂಪ ಅಸ್ತಿತ್ವಕ್ಕೆ
ಬಂದಿತು. ಈ ಪದ್ಧತಿಯಲ್ಲಿ ಜನರ ಆಡಳಿತವನ್ನು ಪ್ರತಿನಿಧಿ ಮೂಲಕ ಮಾಡಲಾಗುತ್ತದೆ. ದೇಶವನ್ನು ಆಳಲು
ಜನರು ತಮ್ಮಲ್ಲಿಯೇ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ, ಉದಾಹರಣೆಗೆ,
ಭಾರತದಲ್ಲಿ, ಸಂಸತ್ ಸದಸ್ಯರು (ಸಂಸದರು), ರಾಜ್ಯ ಶಾಸಕಾಂಗ ಸಭೆಗಳು/ ಪರಿಷತ್ತುಗಳ ಸದಸ್ಯರು (ಶಾಸಕರು, ಎಂಎಲ್ಸಿಗಳು),
ನಿಗಮಗಳ ಸದಸ್ಯರು, ಇತ್ಯಾದಿ, ಎಲ್ಲರೂ ನಮ್ಮ ಪ್ರತಿನಿಧಿಗಳು.
(ಬ) ಚುನಾವಣಾ ವಿಧಾನ: ಜನರಿಗೆ
ತಮ್ಮ ಪ್ರತಿನಿಧಿಯನ್ನು ಸ್ವಂತ ಆಯ್ಕೆ ಮಾಡುವ ಹಕ್ಕು ಇರುತ್ತದೆ. ಜನರು ಚುನಾವಣೆಯ ಮುಖಾಂತರ
ತಮ್ಮ ಪ್ರತಿನಿಧಿಯನ್ನು ಶಾಸನ ಸಭೆಗಳ ಸದಸ್ಯರಾಗಿ
ನೇಮಕ ಮಾಡುತ್ತಾರೆ. ಉದಾ. ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳು, ವಿಧಾನಸಭಾ ಚುನಾವಣೆಗಳು.
(ಸಿ) ನೇಮಕಾತಿ ವಿಧಾನ: ಈ
ಪದ್ಧತಿಯಲ್ಲಿ ಪ್ರತಿನಿಧಿಗಳು ನಾಮನಿರ್ದೇಶನ ಅಥವಾ ನೇಮಕಾತಿ ಮೂಲಕ ತಮ್ಮ ಸ್ಥಾನವನ್ನು
ಆಕ್ರಮಿಸಿಕೊಳ್ಳುತ್ತಾರೆ, ಉದಾಹರಣೆಗೆ, ಭಾರತದ ರಾಷ್ಟ್ರಪತಿಗಳು ರಾಜ್ಯಸಭೆಗೆ 12 ಸದಸ್ಯರನ್ನು ನೇಮಿಸುತ್ತಾರೆ.
(ಡ) ಸರ್ಕಾರೇತರ: ಈ
ಪದ್ಧತಿಯಲ್ಲಿ ನಾಗರಿ ಸಮಾಜವು ಜನರ ಪ್ರತಿನಿಧಿತ್ವ ಮಾಡಲು ಯತ್ನಿಸುವುದು. ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಗುಂಪುಗಳು, ರೈತ ಸಂಘಟನೆಗಳಂತಹ ವಿವಿಧ ಒತ್ತಡ
ಗುಂಪುಗಳ ಮೂಲಕ ನಾಗರಿಕ ಸಮಾಜವು ಜನರನ್ನು ಪ್ರತಿನಿಧಿಸುತ್ತದೆ.
ಪ್ರಶ್ನೆ.6 ಮತದಾರರಿಗೆ ಮತ ಚಲಾಯಿಸಲು ಪ್ರೋತ್ಸಾಹಿಸುವ ಮಾರ್ಗಗಳನ್ನು ಸೂಚಿಸಿ.
ಉತ್ತರ: • ಅಗ್ನಿಯಂತಹ
ಸರ್ಕಾರೇತರ ಸಂಸ್ಥೆಗಳು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸಲು ವಿಶೇಷ
ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿವೆ.
• ಬೀದಿ ನಾಟಕಗಳು, ರೈಲು
ನಿಲ್ದಾಣಗಳಲ್ಲಿ ಫ್ಲ್ಯಾಶ್ ವಿಡಿಯೋಗಳು, ಕಾಲೇಜುಗಳಲ್ಲಿ ಮತದಾನದ
ಮಹತ್ವದ ಬಗ್ಗೆ ಸಂವಾದ, ಚರ್ಚೆಗಳು, ಮಾತುಕತೆಗಳು.
• ಯುವಜನರು ಮತದಾನ ಮಾಡಲು ಪ್ರೋತ್ಸಾಹಿಸಲು ಮತದಾರರ
ನೋಂದಣಿ ಅಭಿಯಾನಗಳು.
• ಜಾಹೀರಾತುಗಳು, ವಿಶೇಷವಾಗಿ
ಸೆಲೆಬ್ರಿಟಿಗಳನ್ನು ಫ್ರಾಂಚೈಸಿಯ 'ರಾಯಭಾರಿಗಳು' ಆಗಿ ನೇಮಕ ಮಾಡುವುದು.
• ಪ್ರಜಾಪ್ರಭುತ್ವದ ರಕ್ಷಣೆಗೆ 100% ಮತದಾರರು ಮತ
ಚಲಾಯಿಸುವುದು ಕಡ್ಡಾಯವಾಗಿದೆ ಎಂದು ಜನಮನದ ಮೇಲೆ ಬಿಂಬಿಸುವುದು.
ಉಪಕ್ರಮ: ಭಾರತದಲ್ಲಿಯ ಯಾವುದೇ
ರಾಷ್ಟ್ರೀಯ ಪಕ್ಷದ ಇತಿಹಾಸವನ್ನು ಬರೆಯಿರಿ.
6. ನ್ಯಾಯಮಂಡಳದ
ಭೂಮಿಕೆ
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು
ಗುರುತಿಸಿ ವಿಧಾನಗಳನ್ನು ಪೂರ್ಣಗೊಳಿಸಿರಿ.
1. ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ ಸಂವಿಧಾನದಲ್ಲಿ
ಸ್ಪಷ್ಟ ನಿಬಂಧನೆಯನ್ನು ಮಾಡಿದ ಮೊದಲ ದೇಶ..................
(ಭಾರತ, ಅಮೆರಿಕ, ಯುನೈಟೆಡ್ ಕಿಂಗ್ಡಮ್, ಸೋವಿಯತ್ ರಷ್ಯಾ)
2. ನ್ಯಾಯಾಂಗದ
ಪ್ರಾಥಮಿಕ ಕಾರ್ಯವೆಂದರೆ .................. ಆಗಿದೆ.
(ಕಾನೂನುಗಳನ್ನು
ಮಾಡುವುದು, ಕಾರ್ಯಗತಗೊಳಿಸುವುದು, ನಿರ್ಧರಿಸುವುದು, ನೇಮಕಾತಿಗಳನ್ನು ಮಾಡುವುದು)
(ಬ) ತಪ್ಪು ಜೋಡಿಯನ್ನು ಸರಿಪಡಿಸಿ ಬರೆಯಿರಿ.
(i) ಲಿಖಿತ
ಸಂವಿಧಾನ - ಭಾರತ
(ii) ನ್ಯಾಯಾಂಗ
ಮರುಸಂಘಟನೆ - ಯುನೈಟೆಡ್ ಕಿಂಗ್ಡಮ್
(iii) ಸ್ವತಂತ್ರ ನ್ಯಾಯಾಂಗ – ಅಮೇರಿಕಾ
ಉತ್ತರ: (ii) ನ್ಯಾಯಾಂಗ ಮರುಸಂಘಟನೆ - ಯುನೈಟೆಡ್ ಕಿಂಗ್ಡಮ್ ಇದು
ತಪ್ಪು, ಅಮೇರಿಕಾ ಸರಿಯಾದ ಉತ್ತರ ವಿದೆ.
(ಕ) ನೀಡಿರುವ
ಹೇಳಿಕೆಗಳಿಗೆ ಸೂಕ್ತವಾದ ಸಂಕಲ್ಪನೆಯನ್ನು ಬರೆಯಿರಿ.
1. ಸಾರ್ವಜನಿಕ
ದೃಷ್ಟಿಯಿಂದ
ಪ್ರಮುಖ
ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿ – ಜನಹಿತ ಯಾಚಿಕೆ-Public
Interest Litigation(PIL)
2. ನ್ಯಾಯಾಧೀಶರನ್ನು
ತೆಗೆದುಹಾಕುವ ವಿಧಾನ – ಮಹಾಭಿಯೋಗ
3. ನಿರ್ದಿಷ್ಟ ನ್ಯಾಯಾಲಯದಲ್ಲಿ ನಿರ್ದಿಷ್ಟ ವಿಷಯಗಳಿಗೆ
ಸಂಬಂಧಿಸಿದ ಪ್ರಕರಣಗಳನ್ನು ಸಲ್ಲಿಸಲು ಬರುವ ಅಧಿಕಾರ ಕ್ಷೇತ್ರ -ಮೂಲ
ನ್ಯಾಯವ್ಯಾಪ್ತಿ
ಪ್ರಶ್ನೆ 2 (ಅ) ಈ ಕೆಳಗಿನ ಸಂಕಲ್ಪನೆ ಚಿತ್ರವನ್ನು ಪೂರ್ಣಗೊಳಿಸಿರಿ.
ರಿಟ್ಸ್ 1 ) ದೇಹೋಪಸ್ಥಿತಿ 2)
ಪರಮಾದೇಶ 3) ಪ್ರತಿಶೋಧ 4) ಅಧಿಕಾರಪೃಚ್ಛೆ 5) ಪ್ರಾಕರ್ಷಣೆ
ಪ್ರಶ್ನೆ.3 ಕೆಳಗಿನ ವಿಧಾನಗಳನ್ನು ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
1. ಅಮೆರಿಕಾದಲ್ಲಿ, ನ್ಯಾಯಾಧೀಶರ ನೇಮಕಾತಿಗೆ ಸಿನೆಟ್ನ
ಒಪ್ಪಿಗೆ ಅಗತ್ಯವಿಲ್ಲ.
ಉತ್ತರ: ತಪ್ಪು,
ಅಮೇರಿಕೆಯ ಅಧ್ಯಕ್ಷರು ಕಳುಹಿಸಿದ ನ್ಯಾಯಾಧೀಶರ ನೇಮಕಾತಿಯ ಪ್ರಸ್ತಾವನೆಗೆ ಸಿನೆಟದ ಒಪ್ಪಿಗೆ
ಅವಶ್ಯಕವಿರುತ್ತದೆ.
2. ಭಾರತದಲ್ಲಿ
ನ್ಯಾಯಾಂಗವು ಸ್ವತಂತ್ರವಾಗಿದೆ.
ಉತ್ತರ: ಸರಿ, ಭಾರತದ
ಸಂವಿಧಾನದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಯ ಸಂಗತಿಗಳ ಸಮಾವೇಶ ಮಾಡಲಾಗಿದೆ.
ಪ್ರಶ್ನೆ.4 ಸಂಸಹಬಂಧವನ್ನು ವಿವರಿಸಿ.
1. ನ್ಯಾಯಾಂಗ
ಮಂಡಳಿ ಮತ್ತು ಕಾರ್ಯಕಾರಿ ಮಂಡಳಿ
ಉತ್ತರ: ಪ್ರಜಾಪ್ರಭುತ್ವದಲ್ಲಿ ನ್ಯಾಯ ಮಂಡಳ ಮತ್ತು
ಕಾರ್ಯಕಾರಿ ಮಂಡಳ ಇವು ಎರಡು ಸರಕಾರದ ಸ್ವಾತಂತ್ರ್ಯ ವಿಭಾಗಗಳು ಇವೆ. ನ್ಯಾಯಮಂಡಳ
ಸ್ವಾತಂತ್ರ್ಯವಾಗಿ ಕಾಯದೆಗನುಸರಿಸಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ ಆದರೆ ಕಾರ್ಯಕಾರಿ
ಮಂಡಳವು ಶಾಸನದ ಧೋರಣೆಗಳು ಹಾಗೂ ಕಾಯದೆಯನ್ನು ಜಾರಿಯಲ್ಲಿ ತರುತ್ತದೆ. ಕೆಲವು ವಿವಾದಗಳಲ್ಲಿ
ಕಾರ್ಯಕಾರಿ ಮಂಡಳವು ಫಿರ್ಯಾದಿ ಅಥವಾ ಪ್ರತಿವಾದಿ ಇರುತ್ತದೆ. ಆಗ ಸ್ವತಂತ್ರ ನ್ಯಾಯಮಂಡಳವು
ಶಾಸನದ ಒತ್ತಡಗಳಿಂದ ನಗರಿಕರನ್ನು ಸಂರಕ್ಷಣೆ ನೀಡುತ್ತದೆ ಮತ್ತು ನೀ:ಷ್ಪಕ್ಷಪಾತ ನ್ಯಾಯ
ಮಾಡುತ್ತದೆ. ಪ್ತರಿ ರಾಜ್ಯಗಳಲ್ಲಿ ಉಚ್ಚ
ನ್ಯಾಯಾಲಯಗಳು ಇರುತ್ತವೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯಗಳು ಎಲ್ಲ ನ್ಯಾಯಾಲಯಗಳಿಗೆ ಬಂಧನಕಾರಕ
ಇರುತ್ತವೆ. ಅದು ಇತರ ಎಲ್ಲ ನ್ಯಾಯಾಲಯಗಳ ಮೇಲೆ ನಿಯಂತ್ರಣೆ ಇಡುತ್ತದೆ. ಉಚ್ಚ ನ್ಯಾಯಾಲಯದ
ನಿರ್ಣಯದ ವಿರುಧ್ದ್ಧವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ಸ್ ಯಾಚಿಕೆ ದಾಖಲಿಸಲು ಬರುತ್ತದೆ. ಎರಡು
ನ್ಯಾಯಾಲಯಗಳಿಗೆ ಸಂವಿಧಾನವು ಮೂಲಭೂತ ಹಕ್ಕುಗಳ ಸಂರಕ್ಷಣೆಮಾಡುವ ಸಲುವಾಗಿ ರಿಟ್ಸ್ ಜಾರಿ ಮಾಡುವ
ಹಕ್ಕು ನೀಡಿದೆ.
2. ಸರ್ವೋಚ್ಚ
ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ
ಉತ್ತರ: ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವು ಸರ್ವೋಚ್ಚ
ನ್ಯಾಯಾಂಗ ಮಂಡಲವಾಗಿದೆ. ಪ್ತರಿ ರಾಜ್ಯಗಳಲ್ಲಿ ಉಚ್ಚ ನ್ಯಾಯಾಲಯಗಳು ಇರುತ್ತವೆ. ಸರ್ವೋಚ್ಚ
ನ್ಯಾಯಾಲಯದ ನಿರ್ಣಯಗಳು ಎಲ್ಲ ನ್ಯಾಯಾಲಯಗಳಿಗೆ ಬಂಧನಕಾರಕ ಇರುತ್ತವೆ. ಅದು ಇತರ ಎಲ್ಲ
ನ್ಯಾಯಾಲಯಗಳ ಮೇಲೆ ನಿಯಂತ್ರಣೆ ಇಡುತ್ತದೆ. ಉಚ್ಚ ನ್ಯಾಯಾಲಯದ ನಿರ್ಣಯದ ವಿರುಧ್ದ್ಧವಾಗಿ
ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ಸ್ ಯಾಚಿಕೆ ದಾಖಲಿಸಲು ಬರುತ್ತದೆ. ಎರಡು ನ್ಯಾಯಾಲಯಗಳಿಗೆ
ಸಂವಿಧಾನವು ಮೂಲಭೂತ ಹಕ್ಕುಗಳ ಸಂರಕ್ಷಣೆಮಾಡುವ ಸಲುವಾಗಿ ರಿಟ್ಸ್ ಜಾರಿ ಮಾಡುವ ಹಕ್ಕು ನೀಡಿದೆ.
ಪ್ರ.5. ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.
1. ನ್ಯಾಯಾಧೀಶರ
ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಮಂಡಳಿ ಏಕೆ ಪ್ರಮುಖ ಪಾತ್ರ ವಹಿಸಬೇಕು?
ಉತ್ತರ: ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ
ನ್ಯಾಯಮಂಡಳದ ಪಾತ್ರ ಮುಖ್ಯವಾಗಿರುತ್ತದೆ. ಏಕೆಂದರೆ ನ್ಯಾಯಮಂಡಳ ಸ್ವಾತಂತ್ರ್ಯವಾಗಿರಲು ಮತ್ತು
ಶಾಸನದ ಪ್ರಭಾವದಿಂದ ಮುಕ್ತವಾಗಿ ಇರಲು ಯೋಗ್ಯ ಮತ್ತು ನೀ:ಷ್ಪಕ್ಷ ವ್ಯಕ್ತಿಯ ಆಯ್ಕೆಯಾಗುವುದು
ಮಹತ್ವದಿರುತ್ತದೆ. ಭಾರತದಲ್ಲಿ ಕ್ವಾಲೇಜಿಯಂ ಪಧ್ದ್ಧತಿಯಿಂದಾಗಿ ಶಾಸನದ ಹಸ್ತಕ್ಷೇಪ
ಕಡಿಮೆಯಾಗಿದೆ. ಇದರಿಂದ ನ್ಯಾಯ ವ್ಯವಸ್ಥೆಯ ಸ್ವಾತಂತ್ರ್ಯ ಉಳಿದುಕೊಂಡಿದೆ.
2. ಇಂದಿನ
ಕಾಲದಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ಮುಖ್ಯವಾಗಿದೆ.
ಉತ್ತರ: ಕಾರ್ಯಾಂಗದ ಮೇಲೆ ನಾಗರೀಕರ ಹಕ್ಕುಗಳ
ಸಂರಕ್ಷಣೆ ಮಾಡಲು ಕೆಲವೊಮ್ಮೆ ಮರ್ಯಾದೆ ಬೀಳುತ್ತದೆ. ಆಗ ನ್ಯಾಯಾಂಗವು ಜನಹಿತ ಯಾಚಿಕೆಯ
ಮಾದ್ಯಮದಿಂದ ಅಥವಾ ಸ್ವತ: ದಾಖಲು ತೆಗೆದುಕೊಂಡು ನ್ಯಾಯ ಒದಗಿಸಿ ಕೊಡುತ್ತದೆ. ಉದಾಹರಣೆಗೆ, ಪ್ರದುಷಣಮುಕ್ತ ಪರ್ಯವರಣದ ಸಂಕಲ್ಪನೆಯು ನ್ಯಾಯಾಲಯದ ಕ್ರಿಯಾಶೀಲತೆಯಿಂದ ಬಂದಿದೆ.
ಆದರೆ ಅದನ್ನು ದುರ್ಬಳಕೆ ಮಾಡಬಾರದು. ಇಲ್ಲದಿದ್ದರೆ ಕಾರ್ಯಾಂಗದ ಹಸ್ತಕ್ಷೇಪ ಆಗಬಹುದು.
ಪ್ರಶ್ನೆ.5 ಕೊಟ್ಟ ಸಂಗತಿಗಳ ಆಧಾರದ ಮೇಲೆ ಈ ಕೆಳಗಿನ ಪ್ರಶ್ನೆಗಳಿಗೆ
ವಿವರವಾದ ಉತ್ತರಗಳನ್ನು ಬರೆಯಿರಿ.
ನ್ಯಾಯಾಲಯಿನ ಸ್ಥಳಾಂತರ
ಪ್ರಕ್ರಿಯೆಯನ್ನು ವಿವರಿಸಿ.
(i) ನ್ಯಾಯಾಂಗ
ಪುನರ್ರಚನೆಯ ಅರ್ಥ
(ii) ಅವಶ್ಯಕತೆ
(iii) ಅದು
ಯಾವಾಗ ಮತ್ತು ಎಲ್ಲಿ ಪ್ರಾರಂಭವಾಯಿತು?
(iv) ಭಾರತೀಯ ಸಂದರ್ಭ
ಉತ್ತರ: (i) ನ್ಯಾಯಾಂಗ ಪುನರ್ರಚನೆಯ ಅರ್ಥ: ನ್ಯಾಯಾಂಗ
ಪುನರರಚನೆ ಎಂದರೆ ಸಂಸತ್ತು ನಿರ್ಮಿಸಿದ ಕಾಯ್ದೆಯು ಸಂವಿಧಾನದೊಂದಿಗೆ ಸುಸಂಗತವಾಗಿದೆಯೋ ಅಥವಾ
ಇಲ್ಲವೋ ಎಂಬುದನ್ನು ತಪಾಸಣೆ ಮಾಡಿ ನೋಡುವುದು ಹಾಗೂ ಸಂವಿಧಾನದೊಂದಿಗೆ ಸುಸಂಗತವಿರದ
ಕಾಯ್ದೆಗಳನ್ನು ಘಟನಾಬಾಹ್ಯ ಮಾಡುವ ಅಧಿಕಾರ ನ್ಯಾಯಾಂಗ ವ್ಯವಸ್ಥೆಗೆ ಇರುತ್ತದೆ. ಇದಕ್ಕೆ
ನ್ಯಾಯಾಂಗ ಪುನರರಚನೆ ಎನ್ನುತ್ತಾರೆ.
(ii) ಅವಶ್ಯಕತೆ: ಲಿಖಿತ
ಸಂವಿಧಾನವಿರುವ ದೇಶದಲ್ಲಿ ಸಂವಿಧಾನವೇ ಸರ್ಚೊಚ್ಚ ಕಾಯದೆ ಇರುತ್ತದೆ. ಸಂಸತ್ತು ಮಾಡಿದ
ಕಾಯ್ದೆಗಳು ಸಂವಿಧಾನದೊಂದಿಗೆ ಸುಸಂಗತವಾಗಿರದಿದ್ದರೆ ಸಂವಿಧಾನದ ಮೌಲ್ಯವೇ ನಾಶವಾಗುವುದು.
ಆದ್ದರಿಂದ ಸ್ವಾತಂತ್ರ್ಯ ನ್ಯಾಯಾಂಗವು ಈ ಕಾಯ್ದೆಗಳನ್ನು ತಪಾಸಣೆ ಮಾಡುವುದು ಮತ್ತು ಸಂವಿಧಾನದ
ರಕ್ಷಣೆ ಮಾಡುವುದು ಅವಶ್ಯಕವಾಗಿರುಯಿತ್ತದೆ. ಕಾರ್ಯಾಂಗ ಅಥವಾ ಸಂಸತ್ತು ತನ್ನ ಸ್ವಾರ್ಥ
ಇರುವುದರಿಂದ ಸ್ವತ: ಈ ಕಾರ್ಯ ಮಾಡಲು ಸಾಧ್ಯವಿಲ್ಲ.
(iii) ಅದು
ಯಾವಾಗ ಮತ್ತು ಎಲ್ಲಿ ಪ್ರಾರಂಭವಾಯಿತು?
ನ್ಯಾಯಾಂಗದ
ಪುನರರಚನೆಯ ಆರಂಭವು 1803ರಲ್ಲಿ ಅಮೇರಿಕೆಯಲ್ಲಿ ಆಯಿತು. ‘ಮಾರಬರಿ
ವಿರುದ್ಧ ಮ್ಯಾಡಿಸನ್’ ಈ ಖಟಲೆಯಲ್ಲಿ ಅಮೇರಿಕೆಯ ಸರ್ವೋಚ್ಚ
ನ್ಯಾಯಾಲಯವು ಕಾಂಗ್ರೆಸ್ ಮಾಡಿದ ಕಾಯ್ದೆಯನ್ನು ಮೊದಲ ಸಲ ಘಟನೆಬಾಹ್ಯವೆಂದು ಘೋಷಿಸಿತು. ಈ
ಅಧಿಕಾರ ಅಮೇರಿಕೆಯ ಸಂವಿಧಾನದಲ್ಲಿ ಸ್ಪಷ್ಟವಾಗಿ ಲಿಖಿತವಿಲ್ಲದಿದ್ದರೂ ಸೂಚಿತ(implied)ವಾಗಿದೆ.
(iv) ಭಾರತೀಯ ಸಂದರ್ಭ: ಭಾರತದಲ್ಲಿಯೂ
ನ್ಯಾಯಾಂಗದ ಪುನರ್ವಿಲೋಕನೆಯ/ ಪುನರರಚನೆಯ ಅಧಿಕಾರದ ಸ್ಪಷ್ಟವಾದ ಉಲ್ಲೇಖ ಮಾಡಿಲ್ಲವಾದರೂ
ಅಮೇರಿಕೆಯಂತೆ ಈ ಅಧಿಕಾರ ಸೂಚಿತವಾಗಿದೆ. ಸರ್ವೋಚ್ಚ ನ್ಯಾಯಾಲಯವು ಅನೇಕ ಸಲ ಸಂಸತ್ತು ಮಾಡಿದ
ಕಾಯ್ದೆಗಳನ್ನು ಹಾಗೂ ಸಂವಿಧಾನ ತಿದ್ದುಪಡಿಯ ಮಸೂದೆಗಳನ್ನು ತಪಾಸಣೆ ಮಾಡಿ ಘಟನಾಬಾಹ್ಯ ಘೋಷಿತ
ಮಾಡಿರುತ್ತದೆ. ಉದಾ. ಕೇಶವಾನಂದ ಭಾರತಿ ಖಟಲೆ(1973) ಯಲ್ಲಿ ಕೇರಳ ಸರಕಾರದ ವಿರುದ್ಧ 24ನೇ
ಘಟನಾದುರುಸ್ತಿಯ ಕಾಯ್ದೆ ಘಟನಾಬಾಹ್ಯವಿದೆ ಎಂದು ಘೋಷಣೆ
ಮಾಡಿದೆ.
ಉಪಕ್ರಮ: ಭಾರತದಲ್ಲಿ ನ್ಯಾಯಾಂಗ ಕ್ರಿಯಾಶೀಲತೆಯ ಉದಾಹರಣೆಗಳನ್ನು
ಪಟ್ಟಿ ಮಾಡಿ.
ಭಾರತದಲ್ಲಿ ನ್ಯಾಯಾಂಗ ಕ್ರಿಯಾಶೀಲತೆಯ ಉದಾಹರಣೆಗಳನ್ನು ಪಟ್ಟಿ:
1. ಪ್ರಾದುಷಣೆ
ಮುಕ್ತ ಪರ್ಯಾವರಣದ ಅಧಿಕಾರ
2. ರಾಷ್ಟ್ರಗೀತೆಯ ಆದೇಶ: 2016 ರಲ್ಲಿ ಸರ್ವೋಚ್ಚ
ನ್ಯಾಯಾಲಯವು ಚಿತ್ರಮಂದಿರಗಳಲ್ಲಿ ಸಾವಧಾನದಲ್ಲಿ ನಿಂತು
ರಾಷ್ಟ್ರಗೀತೆ ನುಡಿಸಬೇಕೆಂಬ ಕಾಯ್ದೆ ಕಡ್ಡಾಯವಾಗಿಸಿದೆ.
3.
ಕ್ರಿಕೆಟ್ ಸುಧಾರಣೆ: ಲೋಢಾ ಸಮಿತಿಯ ಮೂಲಕ ಸರ್ವೋಚ್ಚ ನ್ಯಾಯಾಲಯವು ಭಾರತೀಯ ಕ್ರಿಕೆಟ್ ನಿಯಾಮಕ
ಮಂಡಲದಲ್ಲಿ ಸುಧಾರಣೆ ಮಾಡಿಸಿದೆ.
4. ಜನಹಿತ ಯಾಚಿಕೆ: ಪ್ರದುಷಣೆ, ಶಿಕ್ಷಣ, ಆರೋಗ್ಯಗಳಂತಹ ವಿಷಯಗಳ
ಮೇಲೆ ನ್ಯಾಯಾಲಯವು ಸ್ವತ: ತಾನಾಗಿ ರಿಟ್ಸ್ ಮೂಲಕ ಹಸ್ತಕ್ಷೇಪ ಮಾಡುತ್ತದೆ.
ವಿಭಾಗ 3: ಜನ ಪ್ರಶಾಸನ
7.
ಜನಪ್ರಶಾಸನ
ಪ್ರಶ್ನೆ.1 (ಅ) ಕೊಟ್ಟ ಪರ್ಯಾಯಗಳಿಂದ ಸರಿಯಾದ ಪರ್ಯಾಯವನ್ನು
ಗುರುತಿಸಿ ವಿಧಾನಗಳನ್ನು ಪೂರ್ಣಗೊಳಿಸಿರಿ.
1. ………………….. ಇವು ಆಡಳಿತ
ವ್ಯವಸ್ಥೆಯ ಬೆನ್ನೆಲುಬುಗಳು ಆಗಿವೆ.
(ಭೌತಿಕ
ಸಂಪನ್ಮೂಲಗಳು, ಮಾನವ
ಸಂಪನ್ಮೂಲಗಳು, ನೈಸರ್ಗಿಕ
ಸಂಪನ್ಮೂಲಗಳು, ಭೌಗೋಳಿಕ
ಸಂಪನ್ಮೂಲಗಳು)
ಉತ್ತರ: ಮಾನವ ಸಂಪನ್ಮೂಲಗಳು
2. POSDCORB ಎಂಬ
ಸಂಕ್ಷೇಪಣವನ್ನು ಗುಲ್ಲಿಕ್ ಮತ್ತು ............. ಇವರು
ಪರಿಚಯಿಸಿದರು.
(ವುಡ್ರೋ
ವಿಲ್ಸನ್, ಹರ್ಬರ್ಟ್
ಸೈಮನ್, ಉರ್ವಿಕ್, ಡ್ವೈಟ್ ವಾಲ್ಡೊ)
ಉತ್ತರ: ಉರ್ವಿಕ್
(ಬಿ) ತಪ್ಪು ಜೋಡಿಯನ್ನು ಸರಿಪಡಿಸಿ
ಬರೆಯಿರಿ.
(i) ಕೌಟಿಲ್ಯ
- ಅರ್ಥಶಾಸ್ತ್ರ
(ii) ಅರಿಸ್ಟಾಟಲ್
- ರಾಜಕೀಯ
(iii) ಮ್ಯಾಕಿಯಾವೆಲ್ಲಿ – ಗಣರಾಜ್ಯ
ಉತ್ತರ: ಮ್ಯಾಕಿಯಾವೆಲ್ಲಿ ಇವರು ದ ಪ್ರಿನ್ಸ್ ಎಂಬ ಗ್ರಂಥ ಬರೆದಿದ್ದಾರೆ. ರಿಪಬ್ಲಿಕ್
ಇದು ಪ್ಲೇಟೋ ಬರೆದ ಗ್ರಂಥವಾಗಿದೆ.
(ಕ) ನೀಡಿರುವ ಹೇಳಿಕೆಗಳಿಗೆ ಸೂಕ್ತವಾದ ಸಂಕಲ್ಪನೆಯನ್ನು ಬರೆಯಿರಿ.
1. 18 ನೇ
ಶತಮಾನದಲ್ಲಿ ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿ ಸರ್ಕಾರಿ ಆಡಳಿತ ವ್ಯವಸ್ಥೆ –
ಉತ್ತರ: ಕ್ಯಾಮೆರಲಿಝಮ್ , ಇದು 18 ನೇ ಶತಮಾನದಲ್ಲಿ ಜರ್ಮನಿ ಮತ್ತು
ಆಷ್ಟ್ರೇಲಿಯಾದಲ್ಲಿಯ ಶಾಸಕಿಯ ವ್ಯವಸ್ಥಾಪನೆಯಲ್ಲಿ ಉಪಯೋಗಿಸುತ್ತಿದ್ದ ಪ್ರಣಾಳಿಕೆಯಾಗಿತ್ತು.
2. ಸಾಮಾಜಿಕ
ಮತ್ತು ಪರಿಸರ ಜಾಗೃತಿಯನ್ನು ಸಂಯೋಜಿಸಲು ಕಂಪನಿಗಳು ಮಾಡಿದ ಪ್ರಯತ್ನಗಳು -
ಉತ್ತರ: ಉದ್ದಿಮೆಗಳ ಸಾಮಾಜಿಕ ಹೊಣೆಗಾರಿಕೆ (CSR) . CSR
ಎಂದರೆ ಕಂಪನಿಗಳು ಸಮಾಜ ಹಾಗೂ ಪರ್ಯವರಣದ ಒಳಿತಿಗಾಗಿ ಮಾಡಿದ ಕೆಲಸಗಳು.
ಪ್ರಶ್ನೆ.3 ಕೆಳಗಿನ ವಿಧಾನ ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
1. ಆಡಳಿತದ ಮೊದಲ ಹೆಜ್ಜೆ ಉದ್ಯೋಗಿಗಳ ನೇಮಕಾತಿಯದ್ದು
ಇರುತ್ತದೆ.
ಉತ್ತರ: ತಪ್ಪು, ಆಡಳಿತದ
ಮೊದಲ ಹೆಜ್ಜೆ ನಿಯೋಜನೆಯದ್ದಾಗಿದೆ. ನಂತರ ಉದ್ಯೋಗಿಗಳ ನೇಮಕಾತಿಯದ್ದು ಇರುತ್ತದೆ. POSDCORBದಲ್ಲಿ ನಿಯೋಜನೆಗೆ ಪ್ರಾಧಾನ್ಯ ಕೊಡಲಾಗಿದೆ.
2. ಸಾರ್ವಜನಿಕ ಆಡಳಿತ ಕ್ಷೇತ್ರವು ಭಾರತದಲ್ಲಿ
ಹುಟ್ಟಿಕೊಂಡಿತು.
ಉತ್ತರ: ಸಾರ್ವಜನಿಕ ಆಡಳಿತ(ಜನಪ್ರಶಾಸನೆ)ದ ಜನ್ಮವು
ಅಮೇರಿಕೆಯಲ್ಲಿ ಆಯಿತು. ವೂಡ್ರೋ ವಿಲ್ಸನ್ ಇವರು 1887ರಲ್ಲಿ ಬರೆದ ಸಂಶೋಧನೆ ನಿಬಂಧದ ಮೂಲಕ
ಈ ಕ್ಷೇತ್ರದ ಅಡಿಪಾಯ ಹಾಕಿದರು.
ಪ್ರಶ್ನೆ.3 ಸಂಸಹಬಂಧವನ್ನು ವಿವರಿಸಿ.
1. ರಾಜಶಾಸ್ತ್ರ ಹಾಗೂ
ಜನಪ್ರಶಾಸನ
ಉತ್ತರ: ರಾಜ್ಯಶಾಸ್ತ್ರವು ರಾಜ್ಯ, ಆಡಳಿತ ಮತ್ತು ರಾಜಕೀಯವನ್ನು ಅಧ್ಯಯನ ಮಾಡುತ್ತದೆ, ಆದರೆ
ಸಾರ್ವಜನಿಕ ಆಡಳಿತವು ಸರ್ಕಾರಿ ನಿರ್ಧಾರಗಳ ಅನುಷ್ಠಾನ ಮತ್ತು ಕಾರ್ಯನಿರ್ವಾಹಕ ಶಾಖೆಯ
ಕಾರ್ಯನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ರಾಜಕೀಯ ವಿಜ್ಞಾನದ ಭಾಗವಾಗಿದೆ. ರಾಜಕೀಯ ವಿಜ್ಞಾನವು
ನೀತಿಗಳನ್ನು ರೂಪಿಸುತ್ತದೆ, ಆದರೆ ಸಾರ್ವಜನಿಕ ಆಡಳಿತವು ಆ
ನೀತಿಗಳನ್ನು ಆಚರಣೆಗೆ ತರುತ್ತದೆ.
2. ರಾಷ್ಟ್ರೀಯ ಮಟ್ಟದ ಆಡಳಿತ ಮತ್ತು ರಾಜ್ಯ ಮಟ್ಟದ
ಆಡಳಿತ
ಉತ್ತರ: ರಾಷ್ಟ್ರೀಯ ಮಟ್ಟದ ಆಡಳಿತವನ್ನು ಕೇಂದ್ರ
ಸರ್ಕಾರವು ನಡೆಸುತ್ತದೆ ಮತ್ತು ದೇಶದ ವಿಶಾಲ ನೀತಿಗಳನ್ನು (ಉದಾ. ರಕ್ಷಣೆ, ವಿದೇಶಾಂಗ ವ್ಯವಹಾರಗಳು) ಯೋಜಿಸುತ್ತದೆ, ಆದರೆ ರಾಜ್ಯ ಮಟ್ಟದ
ಆಡಳಿತವನ್ನು ರಾಜ್ಯ ಸರ್ಕಾರವು ನಡೆಸುತ್ತದೆ ಮತ್ತು ರಾಜ್ಯದ ಸ್ಥಳೀಯ ಅಗತ್ಯಗಳ ಮೇಲೆ
ಕೇಂದ್ರೀಕರಿಸುತ್ತದೆ (ಉದಾ. ಶಿಕ್ಷಣ, ಆರೋಗ್ಯ). ಎರಡೂ ಹಂತಗಳು ಪರಸ್ಪರ
ಸಮನ್ವಯದಿಂದ ಕಾರ್ಯನಿರ್ವಹಿಸುತ್ತವೆ.
ಪ್ರಶ್ನೆ.4 ಈ ಕೆಳಗಿನ ಪ್ರಶ್ನೆಗಳಿಗೆ
ಉತ್ತರಗಳನ್ನು ಬರೆಯಿರಿ.
1. ಆಡಳಿತದ
ಕೆಲಸ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿ.
ಉತ್ತರ: ಆಡಳಿತ ಕಾರ್ಯವನ್ನು ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ನಡೆಸಲಾಗುತ್ತದೆ. ಕೇಂದ್ರ ಸರ್ಕಾರವು ಸಚಿವಾಲಯಗಳ ಮೂಲಕ
ಕೆಲಸ ಮಾಡುತ್ತದೆ (ಉದಾ. ಗೃಹ, ರಕ್ಷಣಾ), ಅಲ್ಲಿ
ಸಚಿವರು ಮತ್ತು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುತ್ತಾರೆ. ರಾಜ್ಯ ಮಟ್ಟದಲ್ಲಿ ಸಚಿವಾಲಯಗಳು
ಮತ್ತು ಆಯೋಗಗಳು ಸಹ ಇವೆ. ಸ್ಥಳೀಯ ಮಟ್ಟದಲ್ಲಿ, ಆಡಳಿತವನ್ನು
ಕಲೆಕ್ಟರ್ಗಳು, ತಹಶೀಲ್ದಾರ್ಗಳು, ಗ್ರಾಮ
ಸೇವಕರ ಮೂಲಕ ನಡೆಸಲಾಗುತ್ತದೆ. ಅಧಿಕಾರಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ
ಮಾಡಲಾಗುತ್ತದೆ ಮತ್ತು ಅವರು ಸಂವಿಧಾನದ ಮೌಲ್ಯಗಳ ಪ್ರಕಾರ ಕೆಲಸ ಮಾಡುತ್ತಾರೆ.
2. ಸಾರ್ವಜನಿಕ
ನೀತಿ ನಿರೂಪಣೆಯ ಹಂತಗಳನ್ನು ವಿವರಿಸಿ.
ಉತ್ತರ: ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಮೂರು
ಹಂತಗಳಿವೆ:
(i) ನೀತಿ ಆಯ್ಕೆ:
ನಾಗರಿಕರ ಸಮಸ್ಯೆಗಳನ್ನು ಆದ್ಯತೆ ನೀಡಲಾಗುತ್ತದೆ, ಚರ್ಚಿಸಲಾಗುತ್ತದೆ
ಮತ್ತು ಯೋಜನೆಯನ್ನು ರೂಪಿಸಲಾಗುತ್ತದೆ (ಉದಾ. ವಿದ್ಯುತ್ ಸರಬರಾಜು).
(ii) ನೀತಿ
ಅನುಷ್ಠಾನ: ನೀತಿಯನ್ನು ಕಾರ್ಯಗತಗೊಳಿಸಲಾಗುತ್ತದೆ.
(iii) ನೀತಿ
ಪರಿಣಾಮ: ನೀತಿಯ ಪರಿಣಾಮವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಮೌಲ್ಯಮಾಪನ
ಮಾಡಲಾಗುತ್ತದೆ.
ಪ್ರಶ್ನೆ.5 ಕೊಟ್ಟ ಸಂಗತಿಗಳ ಆಧಾರದ ಮೇಲೆ ಈ ಕೆಳಗಿನ ಪ್ರಶ್ನೆಗಳಿಗೆ
ವಿವರವಾದ ಉತ್ತರಗಳನ್ನು ಬರೆಯಿರಿ.
ಸಾರ್ವಜನಿಕ ಆಡಳಿತದ ವ್ಯಾಪ್ತಿಯು (i) ನಿಯೋಜನೆ (ii)
ಸಂಘಟನೆ (iii) ಕಾರ್ಮಿಕರ
ನೇಮಕಾತಿ (iv)
ಸಮನ್ವಯ (vi) ಅಹವಾಲು
ತಯಾರಿಸುವುದು.
ಉತ್ತರ: ಸಾರ್ವಜನಿಕ ಆಡಳಿತದ ವ್ಯಾಪ್ತಿಯನ್ನು POSDCORB
ಎಂಬ ಸಂಕ್ಷಿಪ್ತ ರೂಪದಿಂದ ಅರ್ಥೈಸಿಕೊಳ್ಳಲಾಗಿದೆ:
(i) ಯೋಜನೆ:
ಆಡಳಿತದ ಮೊದಲ ಹೆಜ್ಜೆ ಉದ್ದೇಶಗಳ ಯೋಜನೆಯನ್ನು ಸಿದ್ಧಪಡಿಸುವುದು (ಉದಾ. ನೀತಿ ಆಯೋಗದ ಯೋಜನೆ).
(ii) ಸಂಘಟನೆ:
ಗುರಿಗಳನ್ನು ಸಾಧಿಸಲು ಸರ್ಕಾರಿ ಯಂತ್ರೋಪಕರಣವನ್ನು ಸ್ಥಾಪಿಸಲಾಗಿದೆ (ಉದಾ. ಅಖಿಲ ಭಾರತ
ಸೇವೆಗಳು).
(iii) ನೇಮಕಾತಿ:
ಆಡಳಿತಕ್ಕೆ ಸೂಕ್ತ ಉದ್ಯೋಗಿಗಳ ಆಯ್ಕೆ ಮತ್ತು ತರಬೇತಿಯನ್ನು ಮಾಡಲಾಗುತ್ತದೆ (ಉದಾ. UPSC/MPSC).
(iv) ಸಮನ್ವಯ:
ವಿವಿಧ ಇಲಾಖೆಗಳ ನಡುವೆ ಏಕರೂಪತೆಯನ್ನು ತರಲು ಸಮನ್ವಯವನ್ನು ಮಾಡಲಾಗುತ್ತದೆ.
(v) ವರದಿಗಳ
ತಯಾರಿಕೆ: ಕೆಲಸದ ವರದಿಗಳನ್ನು ಸಿದ್ಧಪಡಿಸುವ ಮೂಲಕ
ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆ.
ಈ ಎಲ್ಲಾ ಅಂಶಗಳು ಸಾರ್ವಜನಿಕ ಆಡಳಿತವನ್ನು
ಪರಿಣಾಮಕಾರಿಯಾಗಿಸುತ್ತವೆ.
ಉಪಕ್ರಮ: ಭಾರತ
ಸರ್ಕಾರದ ಗೃಹ ವ್ಯವಹಾರ ಸಚಿವಾಲಯದ ಇತ್ತೀಚಿನ ವಾರ್ಷಿಕ ವರದಿಯನ್ನು ಓದಿ. ಅದರಲ್ಲಿರುವ ಕೆಲಸದ
ಪ್ರಮುಖ ಲಕ್ಷಣಗಳನ್ನು ಗಮನಿಸಿ.
8. ವಿಕಾಸ ಪ್ರಶಾಸನೆ
ಪ್ರ.1. ನೀಡಿರುವ ಹೇಳಿಕೆಗಳಿಗೆ ಸೂಕ್ತವಾದ ಸಂಕಲ್ಪನೆಯನ್ನು ಬರೆಯಿರಿ.
1.
ನಾಗರಿಕರ
ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವ
ರಾಜ್ಯ ಉತ್ತರ: ಕಲ್ಯಾಣಕಾರಿ
ರಾಜ್ಯ. ಈ ಸಂಕಲ್ಪನೆಯಲ್ಲಿ ಸರಕಾರವು ನಾಗರೀಕರ ಮೂಲಭೂತ ಅವಶ್ಯಕತೆಗಳಾದ ಆಹಾರ. ವಸ್ತ್ರ, ವಸತಿ, ಶಿಕ್ಷಣ ಹಾಗೂ ಆರೋಗ್ಯ ಇವುಗಳ ಪೂರ್ತತೆ ಮಾಡಲು
ಸಕ್ರಿಯವಾಗಿ ಪ್ರಯತ್ನ ಮಾಡುತ್ತದೆ.
2. ಆಡಳಿತಾತ್ಮಕ ಕೆಲಸದಲ್ಲಿ ಅಡತಡೆಗಳು
ಉತ್ತರ: ಲಾಲ ಫಿತ ಅಥವಾ ದಫ್ತರ್ ಅಡತಡೆಗಳು , ಶಾಸನದ ಕಾರ್ಯದಲ್ಲಿ ನಿಯಮಗಳು, ಕಾಯದೆ ಹಾಗೂ ಇತರ
ಪ್ರಕ್ರಿಯೆಗಳಿಂದಾಗಿ ವಿನಾಕಾರಣ ತಡವಾಗುತ್ತದೆ, ಆಗ ಅದಕ್ಕೆ ಲಾಲ ಫಿತ್
ಅಥವಾ ದಫ್ತರ್ ಅಡತಡೆಗಳು ಎಂದು ಹೇಳಲಾಗುತ್ತದೆ.
ಪ್ರಶ್ನೆ 2 (ಅ) ಈ ಕೆಳಗಿನ ಸಂಕಲ್ಪನೆ
ಚಿತ್ರವನ್ನು ಪೂರ್ಣಗೊಳಿಸಿರಿ.
ಬದಲಾವಣೆ
ಅಭಿಮುಖ: ವಿಕಾಸ ಪ್ರಶಾಸನದಲ್ಲಿ ಬದಲಾವಣೆ ಹಾಗೂ ಸುಧಾರಣೆ ಇವುಗಳ
ಮೇಲೆ ಕೆಲಸ ಮಾಡಲಾಗುತ್ತದೆ.
ಉತ್ಪಾದನೆ
ಅಭಿಮುಖ: ನಿಶ್ಚಿತ ಪರಿಣಾಮ ಹಾಗೂ
ಉದ್ದೇಶಗಳನ್ನು ಪೂರ್ಣ ಮಾಡಲು ಪ್ರಯತ್ನ ಮಾಡಲಾಗುತ್ತದೆ.
ಲೋಕಸಹಭಾಗ:
ವಿಕಾಸ ಪ್ರಕ್ರಿಯೆಯಲ್ಲಿ
ಲೋಕಸಹಭಾಗವಿರುವುದು ಅತ್ಯಂತ ಅಗತ್ಯವಿರುತ್ತದೆ.
ಸಾರ್ವಜನಿಕ ಜವಾಬ್ದಾರಿಗಳು: ಪ್ರಶಾಸಕೀಯ ಅಧಿಕಾರಿಗಳು ವಿಕಾಸಕ್ಕಾಗಿ ಆತ್ಮೀಯತೆಯಿಂದ
ತ್ಯಾಗಭಾವನೆಯಿಂದ ಕಾರ್ಯ ಮಾಡುವುದು ಅಪೇಕ್ಷಿತವಿರುತ್ತದೆ.
ಪ್ರಶ್ನೆ.3 ಕೆಳಗಿನ ವಿಧಾನ ಸರಿಯೋ ಅಥವಾ ತಪ್ಪೋ ಕಾರಣಗಳೊಂದಿಗೆ ವಿವರಿಸಿ.
1. ಬದಲಾವಣೆಗಳು ಮತ್ತು ವಿಸ್ತಾರ ಇವುಗಳ
ಮೇಲೆ ಆಧರಿಸಿದ ದೃಷ್ಟಿಕೋನಕ್ಕೆ ವಿಕಾಸ ಪ್ರಶಾಸನ ಎಂದು ಕರೆಯುತ್ತಾರೆ.
ಉತ್ತರ: ಸರಿಯಾದ ವಿಧಾನ. ವಿಕಾಸ ಪ್ರಶಾಸನವು ಬದಲಾವಣೆ
ಹಾಗೂ ವಿಸ್ತಾರ ಇವುಗಳ ಮೇಲೆ ಆಧರಿಸಿದೆ. ಪಾರಂಪಾರಿಕ ಪ್ರಶಾಸನವು ಸ್ಥಿರತೆಗೆ ಪ್ರಾಧಾನ್ಯ
ನೀಡುತ್ತಿದ್ದರೆ ವಿಕಾಸ ಪ್ರಶಾಸನದಲ್ಲಿ ಹೊಸ ನಿಯೋಜನೆ ಹಾಗೂ ಸುಧಾರಣೆ ಮೂಲಕ ವಿಕಾಸ
ಸಾಧಿಸಲಾಗುತ್ತದೆ.
2. ಸ್ವಾತಂತ್ರ್ಯೋತ್ತರ
ಭಾರತದಲ್ಲಿ
ಉದ್ದೇಶಪೂರ್ವಕವಾಗಿ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಮಾಡಲಾಗಿದೆ.
ಉತ್ತರ: ಸರಿಯಾದ ವಿಧಾನ. ಸ್ವಾತಂತ್ರ್ಯದ ನಂತರ ಭಾರತವು
ದಾರಿದ್ರ್ಯ ನಿರ್ಮೂಲನೆ ಮಾಡಲೆಂದು ಔದ್ಯೋಗಿಕರಣ, ಆಣೆಕಟ್ಟುಗಳ
ನಿರ್ಮಾಣ, ಜಲವಿದ್ಯುತ್ ಪ್ರಕಲ್ಪಗಳಂತಹ ಸಾರ್ವಜನಿಕ ಕ್ಷೇತ್ರಗಳಲ್ಲಿ
ಬಂಡವಾಳ ಹೂಡಿಕೆ ಮಾಡಲಾಯಿತು. ಪಂಡಿತ ನೆಹರು ಅವರು ಇವುಗಳಿಗೆ ‘ಆಧುನಿಕ
ಭಾರತದ ದೇವಲಯಗಳು’ ಎಂದು ಕರೆದರು.
3. 73 ನೇ ತಿದ್ದುಪಡಿಯ ಮೂಲಕ ನಗರಪಾಲಿಕೆಗಳಿಗೆ ಸಾಂವಿಧಾನಿಕ ದರ್ಜೆ
ಕೊಡಲಾಗಿದೆ.
ಉತ್ತರ: ತಪ್ಪು ವಿಧಾನ. 73ನೇ ಘಟನಾ ತಿದ್ದುಪಡಿಯ ಮೂಲಕ
ಪಂಚಾಯತ ರಾಜ ಸಂಸ್ಥೆಗಳಿಗೆ ಘಟನಾತ್ಮಕ/ಸಂವಿಧಾನಾತ್ಮಕ ದರ್ಜೆಯನ್ನು ಕೊಡಲಾಯಿತು.
ಪ್ರಶ್ನೆ.4 ಪರಸ್ಪರ ಸಂಬಂಧವನ್ನು ವಿವರಿಸಿ.
ನಾಗರೀಕರ ಸಹಭಾಗ ಮತ್ತು ವಿಕಾಸ
ಉತ್ತರ: ನಾಗರೀಕರ
ಸಹಭಾಗ ಮತ್ತು ವಿಕಾಸ ಇವುಗಳ ಸಂಬಂಧ ತುಂಬಾ ಘನಿಷ್ಠವಾಗಿರುತ್ತದೆ. ವಿಕಾಸವು ಒಂದು ಸಾಮಾಜಿಕ
ಹಾಗೂ ಆರ್ಥಿಕ ಬದಲಾವಣೆಯ ಪ್ರಕ್ರಿಯೆ ಆಗಿದ್ದು ಸಮಾಜದ ಸಹಭಾಗದಿಂದಲೇ ಯಶಸ್ವಿಯಾಗುತ್ತದೆ. ನಾಗರೀಕರ
ಸಹಭಾಗವು ನಿಯೋಜನೆ, ಕಾರ್ಯತತ್ಪರತೆ ಹಾಗೂ ಮೌಲ್ಯಮಾಪನೆ
ಈ ಎಲ್ಲ ಹಂತಗಳಲ್ಲಿ ಅವಶ್ಯಕವಿರುತ್ತದೆ. ಏಕೆಂದರೆ ಭಾರತದಂತಹ ಬಹುವಿಧ ದೇಶದಲ್ಲಿ ಜನರ
ಅಗತ್ಯತೆಗಳು, ಪ್ರಾಧಾನ್ಯತೆಗಳು ಭಿನ್ನ ಭಿನ್ನ ಇರುತ್ತವೆ.
ಉದಾ. ಭಾರತ ಸರಕಾರವು 1952 ರಲ್ಲಿ ಸಾಮೂಹಿಕ
ವಿಕಾಸ ಕಾರ್ಯಕ್ರಮ ಹಾಗೂ 1953 ರಲ್ಲಿ ರಾಷ್ಟ್ರೀಯ ವಿಸ್ತಾರ ಸೇವೆ ಆರಂಭಿಸಿತು. ಈ
ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗದಲ್ಲಿಯ ಜನರಿಗೆ ವಿಕಾಸ ಕಾರ್ಯದಲ್ಲಿ ಸಹಭಾಗಿ
ಮಾಡಿಕೊಳ್ಳಲಾಯಿತು. ಅದರಂತೆ 73 ನೇ ಮತ್ತು 74 ನೇ ಘಟನಾ ದುರುಸ್ತಿಯಿಂದಾಗಿ ಪಂಚಾಯತಿ ರಾಜ
ಮತ್ತು ನಗರಪಾಲಿಕೆಗಳಿಗೆ ಸಾಂವಿಧಾನಿಕ ದರ್ಜೆ ಪ್ರಾಪ್ತವಾಯಿತು, ಇದರಿಂದಾಗಿ ಸ್ಥಾನಿಕ ಸ್ತರದ
ವಿಕಾಸದಲ್ಲಿ ಜನತೆಯ ಸಹಭಾಗ ಹೆಚ್ಚಾಯಿತು.
ನಾಗರೀಕರ
ಸಹಭಾಗದಿಂದ ವಿಕಾಸ ಕಾರ್ಯಕ್ರಮಗಳು ಹೆಚ್ಚು ಪ್ರಭಾವಿಯಾಗಿ ಮತ್ತು ಪರಿಣಾಮಕಾರಕವಾಗಿ ಆಗುತ್ತವೆ. ಜನ ಸಹಭಾಗದಿಂದ ಸ್ಥಾನಿಕ ಸಮಸ್ಯೆಗಳ
ನಿರಾಕರಣೆ ಸಮಂಜಸ್ಯವಾಗಿ ಮಾಡಲು ಬರುತ್ತದೆ. ಈ ಉದ್ದೇಶಗಳನ್ನು ಪೂರ್ಣ ಮಾಡಲು ಸ್ಥಾನಿಕ
ಸಂಸಾಧನೆಗಳ ಉಪಯೋಗ ಯೋಗ್ಯವಾಗಿ ಮಾಡಲು ಬರುತ್ತದೆ. ಸ್ವಲ್ಪದರಲ್ಲಿ, ನಾಗರೀಕರ ಸಹಭಾಗವು ವಿಕಾಸದ
ಅಡಿಪಾಯವಾಗಿದೆ. ಈ ಸಹಭಾಗ ವಿಕಾಸ ಪ್ರಕ್ರಿಯೆಗೆ ಗತಿ ನೀಡುತ್ತದೆ ಹಾಗೂ ಸಮಾಜದಲ್ಲಿ ಸಕಾರಾತ್ಮಕ
ಬದಲಾವಣೆಯನ್ನು ತರುತ್ತದೆ.
ಪ್ರ.5 ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಿರಿ.
1. ಸಾಂಪ್ರದಾಯಿಕ ಸಾರ್ವಜನಿಕ ಆಡಳಿತದಲ್ಲಿ ಯಾವ
ನಾಲ್ಕು ಕ್ಷೇತ್ರಗಳನ್ನು ಸೇರಿಸಲಾಗಿದೆ ಎಂಬುದನ್ನು ಚರ್ಚಿಸಿ.
ಉತ್ತರ:
ಸಾಂಪ್ರದಾಯಿಕ ಸಾರ್ವಜನಿಕ ಆಡಳಿತವು ಈ ಕೆಳಗಿನ
ನಾಲ್ಕು ಕ್ಷೇತ್ರಗಳನ್ನು ಒಳಗೊಂಡಿದೆ:
ಸರ್ಕಾರಿ ಯಂತ್ರೋಪಕರಣಗಳ ಸಂಘಟನೆ: ಇದರಲ್ಲಿ
ಸರ್ಕಾರದ ರಚನೆ, ವಿವಿಧ ಇಲಾಖೆಗಳು, ಸಚಿವಾಲಯಗಳು ಮತ್ತು ಅವುಗಳಿಗೆ ಸಂಬಂಧಿಸಿದ
ಸಂಸ್ಥೆಗಳು ಸೇರಿವೆ. ಉದಾಹರಣೆಗೆ, ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು, ಹಾಗೆಯೇ ಯುಪಿಎಸ್ಸಿ, ಚುನಾವಣಾ ಆಯೋಗದಂತಹ ಸಂಸ್ಥೆಗಳು ಸೇರಿದಂತೆ ಸಚಿವಾಲಯದ ರಚನೆ. ಈ ವ್ಯವಸ್ಥೆಯು
ಸರ್ಕಾರದ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ.
ವಿವಿಧ ಕಾರ್ಯಗಳ ನಿರ್ವಹಣೆ: ಇದು ವಿವಿಧ
ಇಲಾಖೆಗಳ ನಡುವಿನ ನಾಯಕತ್ವ, ಯೋಜನೆ ಮತ್ತು ಸಮನ್ವಯದ
ಮೇಲೆ ಕೇಂದ್ರೀಕರಿಸುತ್ತದೆ. ಉದಾಹರಣೆಗೆ, ರಾಷ್ಟ್ರೀಯ ಮಟ್ಟದಲ್ಲಿ ಯೋಜನೆಯನ್ನು ನೀತಿ ಆಯೋಗವು ಮಾಡುತ್ತದೆ, ಇದು ಸರ್ಕಾರಿ ಕಾರ್ಯಗಳ ನಿರ್ದೇಶನವನ್ನು
ನಿಗದಿಪಡಿಸುತ್ತದೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.
ನಾಗರಿಕ ಸೇವಕರ ಆಡಳಿತ: ಇದರಲ್ಲಿ ನೇಮಕಾತಿ
ಪ್ರಕ್ರಿಯೆಗಳು, ತರಬೇತಿ, ಬಡ್ತಿಗಳು, ಸಂಬಳಗಳು ಇತ್ಯಾದಿಗಳ ನಿರ್ವಹಣೆ ಸೇರಿದೆ. ಉದಾಹರಣೆಗೆ, ಭಾರತದಲ್ಲಿ ಆಡಳಿತ ಸೇವಕರ ನೇಮಕಾತಿ ಮತ್ತು
ತರಬೇತಿಯನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್ಸಿ) ಅಥವಾ ರಾಜ್ಯ ಸಾರ್ವಜನಿಕ ಸೇವಾ
ಆಯೋಗ (ಎಂಪಿಎಸ್ಸಿ) ಮೂಲಕ ಮಾಡಲಾಗುತ್ತದೆ.
ಹಣಕಾಸು ಆಡಳಿತ: ಇದರಲ್ಲಿ ಬಜೆಟ್ ತಯಾರಿಕೆ, ಸಂಸತ್ತಿನ ಹಣಕಾಸು ಸಮಿತಿಗಳು ಮತ್ತು
ಲೆಕ್ಕಪರಿಶೋಧನೆ ಸೇರಿವೆ. ಉದಾಹರಣೆಗೆ, ಸಂಸತ್ತು ವೆಚ್ಚವನ್ನು ನಿಯಂತ್ರಿಸುತ್ತದೆ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಮತ್ತು ಅಂದಾಜು ಸಮಿತಿಯ ಮೂಲಕ ಆರ್ಥಿಕ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
2. ನೀತಿ ಆಯೋಗದ ಸಂಕ್ಷಿಪ್ತ ವಿವರಣೆಯನ್ನು
ಬರೆಯಿರಿ.
ಉತ್ತರ: ನೀತಿ ಆಯೋಗ (ಭಾರತವನ್ನು
ಪರಿವರ್ತಿಸುವ ರಾಷ್ಟ್ರೀಯ ಸಂಸ್ಥೆ - ನೀತಿ ಆಯೋಗ) ಭಾರತ ಸರ್ಕಾರದ ಅತ್ಯುನ್ನತ ಯೋಜನಾ ಸಂಸ್ಥೆಯಾಗಿದ್ದು, ಇದನ್ನು ಯೋಜನಾ ಆಯೋಗದ ಬದಲಿಗೆ 2014 ರಲ್ಲಿ
ಸ್ಥಾಪಿಸಲಾಯಿತು. ಈ ಆಯೋಗದ ಮುಖ್ಯ ಉದ್ದೇಶ ದೇಶದ ಅಭಿವೃದ್ಧಿಗಾಗಿ ದೀರ್ಘಾವಧಿಯ ಮತ್ತು
ಅಲ್ಪಾವಧಿಯ ಗುರಿಗಳನ್ನು ಯೋಜಿಸುವುದು ಮತ್ತು ಯೋಜನೆಗಳನ್ನು ವಿಕೇಂದ್ರೀಕರಿಸುವುದು. ನೀತಿ
ಆಯೋಗವು ತಳಮಟ್ಟದಿಂದ (ಗ್ರಾಮ, ಗುಂಪು, ಜಿಲ್ಲೆ)
ಯೋಜನೆಗಳನ್ನು ಸಿದ್ಧಪಡಿಸಲು ಮತ್ತು ಅವುಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ
ಸಂಯೋಜಿಸಲು ಪ್ರಯತ್ನಿಸುತ್ತದೆ.
ಈ ಆಯೋಗದ ಕೆಲಸದ ವ್ಯಾಪ್ತಿಯು ಕೃಷಿ, ಕೈಗಾರಿಕೀಕರಣ, ಬಡತನ
ನಿರ್ಮೂಲನೆ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಇತ್ಯಾದಿ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ನೀತಿ ಆಯೋಗದಿಂದಾಗಿ,
ಭಾರತವು ಕೇಂದ್ರೀಕೃತ ಯೋಜನೆಯಿಂದ ವಿಕೇಂದ್ರೀಕೃತ ಯೋಜನೆಗೆ ಚಲಿಸಲು
ಪ್ರಾರಂಭಿಸಿದೆ, ಇದರಿಂದಾಗಿ ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಳೀಯ
ಅಗತ್ಯಗಳು ಮತ್ತು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಪರಿಗಣಿಸಬಹುದು.
ಪ್ರಶ್ನೆ.6 ನಿಮ್ಮ ಅಭಿಪ್ರಾಯವನ್ನು ಬರೆಯಿರಿ.
ವಿಕಾಸ ಪ್ರಶಾಸನದಲ್ಲಿ/ಅಭಿವೃದ್ಧಿ ಆಡಳಿತದಲ್ಲಿ ಜನರ ಸಹಭಾಗವು
ಅಗತ್ಯವಾಗಿದೆ.
ಉತ್ತರ: ನನ್ನ ಅಭಿಪ್ರಾಯದಲ್ಲಿ, ಅಭಿವೃದ್ಧಿ ಆಡಳಿತದಲ್ಲಿ ಸಾರ್ವಜನಿಕ
ಭಾಗವಹಿಸುವಿಕೆ ಅತ್ಯಗತ್ಯ. ಅಭಿವೃದ್ಧಿಯು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ
ಪ್ರಕ್ರಿಯೆಯಾಗಿದ್ದು, ಜನರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಇದು
ಅಪೂರ್ಣವಾಗಿ ಉಳಿಯುತ್ತದೆ. ಅಭಿವೃದ್ಧಿಯ ಗುರಿ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದು
ಮತ್ತು ಈ ಗುರಿಯನ್ನು ಸಾಧಿಸಲು, ಜನರ ಅಗತ್ಯತೆಗಳು, ಸಮಸ್ಯೆಗಳು ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಸಾರ್ವಜನಿಕ
ಭಾಗವಹಿಸುವಿಕೆಯು ಸ್ಥಳೀಯ ಸಮಸ್ಯೆಗಳಿಗೆ ಸರಿಯಾದ ಪರಿಹಾರಗಳನ್ನು ಮತ್ತು ಸ್ಥಳೀಯ ಸಂಪನ್ಮೂಲಗಳ
ಹೆಚ್ಚು ಪರಿಣಾಮಕಾರಿ ಬಳಕೆಗೆ ಕಾರಣವಾಗಬಹುದು.
ಉದಾಹರಣೆಗೆ, ಭಾರತದ ಸಂವಿಧಾನದ 73 ನೇ ಮತ್ತು 74 ನೇ
ತಿದ್ದುಪಡಿಗಳು ಪಂಚಾಯತ್ ರಾಜ್ ಮತ್ತು ಪುರಸಭೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿತು,
ಇದು ಸ್ಥಳೀಯ ಮಟ್ಟದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಿತು. ಇದು
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಜನರ ಧ್ವನಿ ಮತ್ತು
ಭಾಗವಹಿಸುವಿಕೆಯನ್ನು ಪರಿಣಾಮಕಾರಿಯಾಗಿ ಸಂಯೋಜಿಸಿತು. ಅಲ್ಲದೆ, ಸಾಮೂಹಿಕ
ಅಭಿವೃದ್ಧಿ ಕಾರ್ಯಕ್ರಮ ಮತ್ತು ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳು ಸಾರ್ವಜನಿಕ
ಭಾಗವಹಿಸುವಿಕೆಯಿಂದಾಗಿ ಯಶಸ್ವಿಯಾಗಿವೆ.
ಸಾರ್ವಜನಿಕ ಭಾಗವಹಿಸುವಿಕೆಯು ಆಡಳಿತ ಮತ್ತು ನಾಗರಿಕರ ನಡುವೆ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ ಮತ್ತು ಸಮಗ್ರವಾಗುತ್ತದೆ. ಆದ್ದರಿಂದ, ಅಭಿವೃದ್ಧಿ ಆಡಳಿತದಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಕೇವಲ ಒಂದು ಆಯ್ಕೆಯಲ್ಲ, ಆದರೆ ಯಶಸ್ವಿ ಅಭಿವೃದ್ಧಿಗೆ ಮೂಲಭೂತ ಆಧಾರವಾಗಿದೆ.
ಉಪಕ್ರಮ: ಯಾವುದೇ ಅಭಿವೃದ್ಧಿ ಕಾರ್ಯಕ್ರಮದ ವಿಸ್ತಾರವಾಗಿ ಅಭ್ಯಾಸ ಮಾಡಿರಿ. ಅದನ್ನು ಹೇಗೆ
ಕಾರ್ಯರೂಪಕ್ಕೆ ತರಲಾಯಿತು ಎಂಬುದರ ಬಗ್ಗೆ ವರ್ಗದಲ್ಲಿ ಚರ್ಚೆ ಮಾಡಿರಿ.
***







0 ಕಾಮೆಂಟ್ಗಳು
ಧನ್ಯವಾದಗಳು