ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಹೃದಯ ಮಂದಿರ ಸದಾ ಬೆಳಗುತ್ತಿರಲಿ

 


ಬೆಳಗಬೇಕು ಪ್ರೀತಿಯ ದೀಪವ ಹೃದಯ ಮಂದಿರದಲ್ಲಿ

ಆತ್ಮೀಯತೆಯ ಆರದ ದೀಪ ಸಮಾಜಮಂದಿರದಲ್ಲಿ

ತೊಲಗಿಸ್ಬೇಕು ದ್ವೇಷ ಅಸೂಯೆಯ ಅಂಧಕಾರವನ್ನು

ಬೆಳಗಬೇಕು ಸ್ನೇಹದ ಚಿರಸ್ಥಾಯಿ ದೀಪ ಮನೋಮಂದಿರದಲಿ

ಅಜ್ಞಾನದ ಅಂಧಕಾರ ದೂರವಾಗಲಿ

ಸ್ವಾರ್ಥದ ತಿಮಿರ ಕಳಚಿಹೋಗಲಿ

ನಮ್ಮೆಲ್ಲರ ಮನ ಮಂದಿರದ ಗರ್ಭಗುಡಿಯಲ್ಲಿ 

ಆತ್ಮೀಯತೆಯ ದಿವ್ಯ ಜ್ಯೋತಿ ಪ್ರಜ್ವಲಿತವಾಗಲಿ

ಸ್ನೇಹ ಗಟ್ಟಿಯಾಗಿ, ವಿಶ್ವಾಸ ವೃದ್ಧಿಯಾಗಲಿ

ದೂರಾದ ಸಂಬಂಧಗಳು ಹತ್ತಿರವಾಗಲಿ

ಮತ್ತೇ ಎಂದೆಂದೂ ಕಳಚಿ ಹೋಗದಂತೆ ಬೆಸೆದು ಹೋಗಲಿ

ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆ ನಿಮ್ಮ ಬಾಳು ಹೊಂಬೆಳಕಾಗಲಿ. 

     ಶ್ರೀ ದಿನೇಶ ಠಾಕೂರದಾಸ ಚವ್ಹಾಣ ಸರ್

      ಜಿ. ಪ. ಪ್ರಾಥಮಿಕ ಕನ್ನಡ ಶಾಲೆ ಬಬಲಾದ ತಾ. ಅಕ್ಕಲಕೋಟ ಜಿ. ಸೊಲ್ಲಾಪುರ 

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಧನ್ಯವಾದಗಳು