ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 17 ಪ್ರಥಮ ಚಿಕಿತ್ಸೆ CHAPTER 17 PRATHAM CHIKITSE std 4rth

ಬಾಲಭಾರತಿ ನಾಲ್ಕನೆಯ ಇಯತ್ತೆ ಪಾಠ 17 ಪ್ರಥಮ ಚಿಕಿತ್ಸೆ 

CHAPTER 17 PRATHAM CHIKITSE std 4rth



೧೭. ಪ್ರಥಮ ಚಿಕಿತ್ಸೆ

ಶಬ್ದಗಳ ಅರ್ಥ

ಮೂರ್ಛ - ಎಚ್ಚರ ತಪ್ಪು; ಅಮುಕು - ಒತ್ತುವದು ; ನಿರ್ಜಲೀಕರಣ - ನೀರಿಲ್ಲದ

ಪ್ರಶ್ನೆ ೧) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

ಅ) ಪ್ರಥಮ ಚಿಕಿತ್ಸೆ ಎಂದರೇನು?

ಉತ್ತರ: ನಾವು ಆಕಸ್ಮಿಕವಾಗಿ ಬಿದ್ದಾಗ, ಸುಟ್ಟಾಗ, ಅಪಘಾತವಾದಾಗ, ನೀರಿನಲ್ಲಿ ಮುಳುಗಿ ಉಸಿರು ಕಟ್ಟಿದಾಗ, ಸೂಕ್ತವಾದ ವೈದ್ಯಕೀಯ ನೆರವು ಸಿಗುವ ಮುನ್ನ ನೀಡುವ ತುರ್ತುಚಿಕಿತ್ಸೆ ಅಥವಾ ಉಪಚಾರವನ್ನು ಪ್ರಥಮ ಚಿಕಿತ್ಸೆ ಎಂದು ಎನ್ನುತ್ತೇವೆ.

ಆ) ಓ. ಆರ್. ಎಸ್. ಎಂದರೇನು?

ಉತ್ತರ: ಓ.ಆರ್.ಎಸ್. ಎಂದರೆ ಓ-ಓರಲ್, ಆರ್-ರೀಹೈಡ್ರೆಷನ್, ಎಸ್-ಸೋಲ್ಯೂಷನ್ಅಂದರೆ ಬಾಯಿಯ ಮೂಲಕ ಕುಡಿಸುವ ಜಲೀಕರಣ ಉಪ್ಪಿನ ದ್ರಾವಣ ಅಥವಾ ಲಿಂಬೇಕಾಯಿ ಉಪ್ಪಿನ ಶರಬತ್ತು ಅನ್ನಬಹುದು.

ಇ) ದೇಹದ ನಿರ್ಜಲೀಕರಣ ಎಂದರೇನು?

ಉತ್ತರ: ಸಣ್ಣ ಮಕ್ಕಳಿಗೆ ಕೆಲವೊಮ್ಮೆ ಭೇದಿ-ಅತಿಸಾರ ಆಗಿ ದೇಹದ ನೀರಿನ ಅಂಶವೆಲ್ಲಾ ಕಡಿಮೆ ಆಗುತ್ತದೆ. ಅದಕ್ಕೆ ದೇಹದ ನಿರ್ಜಲೀಕರಣ ಎನ್ನುತ್ತೇವೆ.

ಈ) ನೀರಿನಲ್ಲಿ ಮುಳುಗಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು?

ಉತ್ತರ: ನೀರಿನಲ್ಲಿ ಮುಳುಗಿದಾಗ ಹೆಚ್ಚು ನೀರು ಕುಡಿದಿದ್ದರೆ ಆತನನ್ನು ಅಂಗಾತ ಮಲಗಿಸಿ ಹೊಟ್ಟೆಯ ಭಾಗವನ್ನು ನಿಧಾನವಾಗಿ ಅಮೂಕಬೇಕು. ಆಗ ಕುಡಿದ ನೀರು ನಿಧಾನವಾಗಿ ಹೊರಬರುತ್ತದೆ. ನಂತರ ಬಾಯಿಂದ ರೋಗಿಯ ಬಾಯಿಗೆ ಕೃತಕ ಉಸಿರಾಟ ಉಂಟಾಗಲು ಸಹಕರಿಸಬೇಕು.

ಪ್ರಶ್ನೆ ೨) ಕೆಳಗಿನ ವಾಕ್ಯಗಳ ಸರಿ / ತಪ್ಪು ಬರೆಯಿರಿ.

ಅ) ಓ. ಆರ್. ಎಸ್. ದ್ರಾವಣ ನಿರ್ಜಲೀಕರಣ ತಪ್ಪಿಸುತ್ತದೆ.            =ಸರಿ

ಆ) ಅತಿ ಹೆಚ್ಚು ರಕ್ತಸ್ರಾವವಾದಾಗ ವೈದ್ಯರಲ್ಲಿಗೆ ಹೋಗುವ ಅಗತ್ಯವಿರುವುದಿಲ್ಲ. =ತಪ್ಪು

ಇ) ಮೂಳೆ ಮುರಿತಕ್ಕೆ ಪ್ರಥಮ ಚಿಕಿತ್ಸೆ ಸುಲಭ.              =ತಪ್ಪು

ಈ) ಪ್ರಥಮ ಚಿಕಿತ್ಸೆ ನಡೆಸಲು ತರಬೇತಿ ಅಗತ್ಯ.             = ಸರಿ

ನುಡಿಮುತ್ತು

·        ಸದೃಢವಾದ ರೀರದಲ್ಲಿ ಸದೃಢವಾದ ಮನಸ್ಸು

·        ಆರೋಗ್ಯವೇ ಭಾಗ್ಯ

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು